ಬಿಜೆಪಿಯೇತರ ರಾಜ್ಯದಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ಜಾರಿ ಮಾಡಲ್ಲ ಎಂಬ ವಿಚಾರಕ್ಕೆ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ರಾಜ್ಯದಲ್ಲಿಯೂ ಆ ಕಾಯ್ದೆ ಜಾರಿಯಾಗುತ್ತದೆ. ಮೋದಿ ಗಂಡಸಿದ್ದಾರೆ. ಕಾಂಗ್ರೆಸ್ ನವರಂತೆ ಹೆಂಗಸರಲ್ಲ. ಮೇಲೆ ಒದ್ದು ಜಾರಿಗೆ ಮಾಡಿಸ್ತಾರೆ. ನೋಡ್ತಾ ಇರಿ ಎಂದು ಹೇಳಿದ್ದಾರೆ.
ಬಡ ಮುಸ್ಲಿಂರ ಅಭಿವೃದ್ಧಿಗೆ ವಕ್ಪ್ ತಿದ್ದುಪಡಿ ಮಾಡಲಾಗಿದೆ. ವಕ್ಪ್ ಆಸ್ತಿ ಲೂಟಿ ಮಾಡಿದವರಿಗೆ ಸಮಸ್ಯೆಯಾಗುತ್ತೆ. ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದರು. ಇಂತಹ ಕಾಯ್ದೆ ತಂದಿರಲಿಲ್ಲ. ದೊಡ್ಡ ದೊಡ್ಡ ನಾಯಕರು ಅಮಾಯಕ ಮುಸ್ಲಿಂಮರ ಆಸ್ತಿಯನ್ನು ಲಪಟಾಯಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ವಕ್ಪ್ ಕಾಯ್ದೆ ತಿದ್ದುಪಡಿ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.