ಬೀದರ್: ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೀದರ್ನ ಮನ್ನಾಏಖೇಳಿ ಗ್ರಾಮದಲ್ಲಿ ನಡೆದ ಆರ್ಯ ಸಮಾಜದ 150ನೇ ವರ್ಷಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಆತ್ಮ ರಕ್ಷಣೆಗಾಗಿ ಮನೆಯಲ್ಲಿ ಶಸ್ತ್ರಾಸ್ತ್ರ ಇಡುವುದು ಅನಿವಾರ್ಯ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ನಮ್ಮ ದೇಶದ ಅಕ್ಕಪಕ್ಕ ಇವೆ. ಇದರಿಂದಾಗಿ ದೇಶದೊಳಗೆ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಆತ್ಮ, ಸಮಾಜ, ದೇಶ ರಕ್ಷಣೆಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಶಸ್ತ್ರಾಸ್ತ್ರ ಇಡುವುದು ಬಹಳ ಅವಶ್ಯಕವಿದೆ. ನಮ್ಮ ರಕ್ಷಣೆಗಾಗಿ ನಾವು ಇಡಲೇಬೇಕಾಗಿದೆ. ನಾನು ಎಲ್ಲರಲ್ಲಿಯೂ ವಿನಂತಿ ಮಾಡುತ್ತೇನೆ. ನಾವು ಎಲ್ಲರೂ ಸಿದ್ಧರಾಗಿರಬೇಕು. ಹೀಗಾಗಿ ಕ್ಷೇತ್ರದ ಜನರು ಮನೆಯಲ್ಲಿ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ ಎಂದು ಕರೆ ಕೊಟ್ಟಿದ್ದಾರೆ.