ಶಿವಮೊಗ್ಗ: ಜನೌಷಧಿ ಕೇಂದ್ರ ಮುಚ್ಚುವ ವಿಚಾರ ಪ್ರಸ್ತಾಪಕ್ಕೆ ಸಂಬಂಧಪಟ್ಟಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ಮುಂದುವರಿಯಬೇಕು. ಖಾಸಗಿಯವರು ಆ್ಯಕ್ಟೀವ್ ಆಗಿ ಕೆಲಸ ಮಾಡುವುದಿಲ್ಲ. ಜನೌಷಧ ಕೇಂದ್ರಕ್ಕೆ ಜವಾಬ್ದಾರಿ ನೀಡಿದರೆ ಅವರು ನಡೆಸುತ್ತಾರೆ. ಜನೌಷಧ ಕೇಂದ್ರಕ್ಕೆ ಎಲ್ಲ ವರ್ಗದವರು ಕೂಡ ಬರುತ್ತಾರೆ. ನಮ್ಮಲ್ಲೂ ಔಷಧಿಯ ಕೊರತೆ ಇಲ್ಲ. ಅನಿವಾರ್ಯವಾದರೆ ಆಸ್ಪತ್ರೆಯ ಆವರಣದ ಹೊರಗಾದರೂ ಜನೌಷಧ ಕೇಂದ್ರ ತೆರೆಯಬೇಕು. ಆದಷ್ಟು ಬೇಗ ಈ ಕುರಿತು ಅರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.