ಕಾರಿನ ಗ್ಲಾಸ್ ಒಡೆದು 4.75 ಲಕ್ಷ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವಲ್ಲಭಭಾಯಿ ಪಟೇಲ್ ರಸ್ತೆಯಲ್ಲಿ ನಡೆದಿದೆ.

ದೃಷ್ಠಿಧಾಮ ಕಣ್ಣಿನ ಆಸ್ಪತ್ರೆ ಮಾಲೀಕ ವಿ.ಡಿ. ಅರುಣ್ ಕುಮಾರ್ ಚಿತ್ರದುರ್ಗದಿಂದ ಹಣ ತಂದು ಕಾರಿನಲ್ಲಿಟ್ಟಿದ್ದರು. ಈ ವೇಳೆ ಹೊಂಚು ಹಾಕಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಖತಾರ್ನಾಕ್ ಕಳ್ಳರು ಕಾರಿನ ಕ್ಲಾಸ್ ಒಡೆದು ಕ್ಷಣ ಮಾತ್ರದಲ್ಲಿ 4.75 ಲಕ್ಷ ರೂ. ಹಣ ಎಗರಿಸಿ ಪರಾರಿಯಾಗಿದ್ದಾರೆ.
ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.