ಬೆಳಗಾವಿ: ಬಸ್ ನಿರ್ವಾಹಕರೊಬ್ಬರ ಮೇಲೆ ಹಲ್ಲೆ ನಡೆದಿರುವ ಪ್ರಕರಣಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಮತ್ತೊಬ್ಬ ಪುಡಾರಿ ಬಾಲ ಬಿಚ್ಚಿದ್ದಾನೆ.
ನಿರ್ವಾಹಕನ ಬೆನ್ನಿಗೆ ನಿಂತ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದು ನಾಲಿಗೆ ಹರಿ ಬಿಟ್ಟಿದ್ದಾನೆ. ನಾಲಿಗೆ ಹರಿಬಿಟ್ಟವನನ್ನು ಎಂಇಎಸ್ ಮುಖಂಡ ಶುಂಭ ಶಳಕೆ ಎನ್ನಲಾಗಿದೆ. ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ನಿರ್ವಾಹಕನಿಗೆ ಕಪ್ಪು ಮಸಿ ಬಳಿದಿದ್ದರು. ಇದನ್ನು ವಿರೋಧಿಸಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಬಸ್ ತಡೆದರು. ಮಾರಿಹಾಳ ಬಳಿಯಲ್ಲಿ ಬಸ್ ನಲ್ಲಿ ಅಪ್ರಾಪ್ತ ಯುವತಿ ಹೋಗುತ್ತಿದ್ದರು. ಬಸ್ ನಲ್ಲಿ ಎರಡು ಟಿಕೆಟ್ ಪಡೆದಿದ್ದರು. ಆದರೆ, ನಿರ್ವಾಹಕ ಬಾಲಕಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾನೆ. ಈ ಬಗ್ಗೆ ಅಲ್ಲಿಯ ಸ್ಥಳೀಯರು ನಿರ್ವಾಹಕನನ್ನು ಪ್ರಶ್ನೆ ಮಾಡಿದ್ದಾರೆ. ಆಗ ಉದ್ಧಟನದ ಉತ್ತರ ಕೊಟ್ಟ ನಿರ್ವಾಹಕನಿಗೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಸಮರ್ಥನೇ ಮಾಡಲ್ಲ. ಪೊಲೀಸ್ ಇಲಾಖೆ ತನ್ನ ಕೆಲಸ ಮಾಡಲಿದೆ. ಘಟನೆ ಹಿನ್ನೆಲೆಯಲ್ಲಿ ಕರವೇ ಸಂಘಟನೆಗಳು ಬೀದಿಗೆ ಇಳಿದಿವೆ.
ಆದರೆ, ನಿರ್ವಾಹಕ ತಾನು ಮಾಡಿರುವ ಕೃತ್ಯ ಗೊತ್ತಾಗಬಾರದು ಎಂಬ ಕಾರಣಕ್ಕೆ ಪ್ರಕರಣ ತಿರುಚಿದ್ದಾನೆ. ಬೆಳಗಾವಿಯ ಶಾಂತಿಗೆ ನಿರ್ವಾಹಕ ಭಂಗ ತಂದಿದ್ದಾನೆ. ಮರಾಠಿ ಬರಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಸೃಷ್ಟಿ ಮಾಡಿದ್ದಾನೆ. ಸತ್ಯಾಸತ್ಯತೆ ತಿಳಿಯದೇ ಮಹಾರಾಷ್ಟ್ರ ಸಾರಿಗೆ ನೌಕರ ಮೇಲೆ ಕನ್ನಡ ಹೋರಾಟಗಾರರು ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವತ್ತು ಕನ್ನಡಿಗರ ಪರ ಇರುತ್ತದೆ. ನಿರ್ವಾಹಕನ ನೀಚ ಪ್ರವೃತ್ತಿಯನ್ನು ಖಂಡಿಸುವುದು ಬಿಟ್ಟು ಸಮರ್ಥನೆ ಮಾಡುತ್ತಿದ್ದಾರೆ. ಪೊಲೀಸರು ಪೋಸ್ಕೋ ಕೇಸ್ ದಾಖಲು ಮಾಡಿದ್ದಾರೆ. ನಿರ್ವಾಹಕನ ನೀಚ ವರ್ತನೆಯ ಬಗ್ಗೆ ಕನ್ನಡ ಸಂಘಟನೆಗಳು ಗನಿಸಬೇಕು. ನಿಷ್ಪಕ್ಷಪಾತವಾಗಿ ಪೊಲೀಸರು ತನಿಖೆ ಮಾಡಬೇಕು. ಅಪ್ರಾಪ್ತ ಬಾಲಕಿಯ ಮೇಲಿನ ಕೃತ್ಯವನ್ನು ಖಂಡಿಸಬೇಕು. ಇದರಿಂದಾಗಿ ಸಮಾಜಕ್ಕೆ ಏನು ಸಂದೇಶ ಕೊಡುತ್ತೀರಿ ಎಂಬುವುದನ್ನು ಚಿಂತಿಸಬೇಕು. ವಾತಾವರಣ ಹಾಳಾಗಬಾರದು ಎಂದರೆ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನೀಚ ಕೃತ್ಯ ಸಮರ್ಥನೆ ಮಾಡುವ ನಾಲಾಯಕ್ ಸಂಘಟನೆಗಳ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ನಾಲಿಗೆ ಹರಿ ಬಿಟ್ಟಿದ್ದಾನೆ.