ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕನ್ನಡ-ಸಾಹಿತ್ಯ-ಸಂಸ್ಕೃತಿ

ನೆನಪು ನೀಲಾಂಜನ | ಪುಸ್ತಕ ವಿಮರ್ಶೆ

September 2, 2025
ನೆನಪು ನೀಲಾಂಜನ | ಪುಸ್ತಕ ವಿಮರ್ಶೆ
Share on WhatsappShare on FacebookShare on Twitter

20ನೆಯ ಶತಮಾನದ ಆರಂಭಕಾಲದಲ್ಲಿ ಮಂಗಳೂರಿನ ಪ್ರತಿಷ್ಠಿತ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ,  ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಹಗಲಿರುಳೆನ್ನದೆ ದುಡಿದ ಮಹಾನ್ ಮಹಿಳೆ ಕಮಲಾದೇವಿ ಚಟ್ಟೋಪಾಧ್ಯಾಯರ  ಇಂಗ್ಲಿಷ್ ನಲ್ಲಿದ್ದ ಜೀವನ ಚರಿತ್ರೆ ‘The Inner Recesses Outer Spaces ಎಂಬ ಪುಸ್ತಕವನ್ನೋದಿ ಅದರಿಂದ ಸ್ಫೂರ್ತಿಗೊಂಡು ತಮ್ಮ ಮನಸ್ಸಿನಾಳಕ್ಕಿಳಿದು ಸ್ಥಿತಗೊಂಡ ಅದರ ಕೆಲವು ಆಯ್ದ ಭಾಗಗಳನ್ನು ನೆನಪಿನ ತುಣುಕುಗಳ ರೂಪದಲ್ಲಿ ಕನ್ನಡದ ಹಿರಿಯ ಲೇಖಕಿ ವೈದೇಹಿಯವರು ತಮ್ಮ ‘ನೆನಪು ನೀಲಾಂಜನ’ಎಂಬ ಕೃತಿಯಲ್ಲಿ  ಅಚ್ಚುಕಟ್ಟಾಗಿ ಪೋಣಿಸಿ ಕೊಟ್ಟಿದ್ದಾರೆ.  ನಿರೂಪಣೆಯನ್ನು ಉತ್ತಮ ಪುರುಷದಲ್ಲೇ ಮಾಡಿ  ಕಮಲಾದೇವಿಯವರ ಆತ್ಮಕಥೆಯೇನೋ ಎಂಬಂತೆ   ತಮ್ಮದೇ  ಆದ ವಿಶಿಷ್ಟ ಶೈಲಿಯಲ್ಲಿ ಮನೋಜ್ಞವಾಗಿ ನಿರೂಪಿಸಿದ್ದಾರೆ.

ಪ್ರತಿದಿನ ಸಂಜೆ ಸಭೆ, ರಾಜಕೀಯ ಚರ್ಚೆ, ಪುರಾಣವಾಚನಗಳು ನಿಯತವಾಗಿ ನಡೆಯುತ್ತಿದ್ದ ಮನೆಯಾಗಿತ್ತು ಕಮಲಾದೇವಿಯವರದು. ಗಂಡಸರೇ ನೆರೆಯುತ್ತಿದ್ದ ಸಭೆಯಲ್ಲಿ ಕಮಲಾರ ದಿಟ್ಟ ಸ್ವಭಾವದ ಅಜ್ಜಿಯೂ ಇರುತ್ತಿದ್ದರು. ಕಮಲಾಗೆ ಓದಿನ ರುಚಿಯನ್ನು ಹತ್ತಿಸಿದವರೂ ಅವರೇ. ಅಮ್ಮನೂ ತುಂಬಾ ಧೈರ್ಯಸ್ಥೆ. ಮಂಗಳೂರಿನ ಸೈಂಟ್ ಆನ್ಸ್ ಕಾನ್ವೆಂಟಿನಲ್ಲಿ  ಕಮಲಳ ವಿದ್ಯಾಭ್ಯಾಸ. ಸುಶಿಕ್ಷಿತ ವಾತಾವರಣದಲ್ಲಿ ಬೆಳೆದ ಕಮಲಾ ನಾಟಕ-ಸಂಗೀತಗಳಲ್ಲೂ ಅಭಿರುಚಿ ಬೆಳೆಸಿಕೊಂಡಳು.  ಪಂಡಿತಾ ರಮಾಬಾಯಿ, ಅನ್ನಿಬೆಸೆಂಟ್, ಮಾರ್ಗರೆಟ್ ಕಸಿನ್ಸ್ ಮೊದಲಾದ  ಅಮ್ಮನ ಗೆಳತಿಯರು ಮಹಿಳಾ ವಿಮೋಚನೆಗಾಗಿ ಹೋರಾಟ ಆರಂಭಿಸಿದ್ದನ್ನು ಕಣ್ಣಾರೆ ಕಂಡರು.  ತಮ್ಮ ಏಳನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದರು.  ತಂದೆಯ ಮಗಳಾಗಿದ್ದ ಕಮಲಾ ಅವರು ತೀರಿಕೊಂಡ ನಂತರ ಸೋದರಮಾವನ ಗರಡಿಯಲ್ಲಿ ರಾಜಾಜಿ-ಗೋಖಲೆಯವರಂಥ  ಹಿರಿಯ ರಾಜಕೀಯದ  ಮುತ್ಸದ್ದಿಗಳು ಸೇರುವ  ಚಾವಡಿಯಲ್ಲಿ ಕುಳಿತು ಸ್ವಾತಂತ್ರ್ಯ ಹೋರಾಟಕ್ಕೆ ತರಬೇತಿ ಪಡೆದರು.

ಹೆಸರಾಂತ ನಯಂಪಳ್ಳಿ ಮನೆಯ ಹುಡುಗನೊಂದಿಗೆ ಕಮಲಾರ ಮದುವೆಯಾಯಿತು. ಆದರೆ ಕಣ್ಣುಮುಚ್ಚಿ ತೆರೆಯುವುದರೊಳಗೆ  ಅವರು ವಿಧವೆಯೂ ಆದರು. ಆದರೆ ವಿಧವೆಯ ಬಾಳು ಕತ್ತಲಲ್ಲಿ ಕರಗಿ ಹೊಗಬಾರದೆಂದು ನಿರ್ಧರಿಸಿದ ಅವರ ಅಮ್ಮ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಮದ್ರಾಸಿಗೆ ಕರೆದುಕೊಂಡು ಹೋದರು. ಅಲ್ಲಿ ಪ್ರತಿಭಾವಂತ ಕಲಾವಿದ-ನಾಟಕಕಾರ ಹರೀಂದ್ರನಾಥ ಚಟ್ಟೋಪಾಧ್ಯಾಯರ ಪರಿಚಯವಾಗಿ  ಪರಿಚಯ ಪ್ರೀತಿಯಾಗಿ ಅವರನ್ನು ಮದುವೆಯಾದರು. ಆದರೆ ಆ ಮದುವೆಯೂ ಕಾರಣಾಂತರಗಳಿಂದ   ಉಳಿಯಲಿಲ್ಲ.

ಒಂದು ದಿನ ಕಮಲಾ ಮಹರ್ಷಿ ಅರವಿಂದರನ್ನು ಭೇಟಿಯಾದರು. ‘ಹೊಸ ಎತ್ತರದ ಹೊಸತೇ ಹಾದಿಯ ಅನ್ವೇಷಣೆ’ಯಲ್ಲಿರುವ ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಆ ಎತ್ತರವನ್ನೇರುವ ಹಂಬಲ ಅವರದ್ದಾಯಿತು.  ಅವರು ತಮ್ಮ ಆಭರಣಗಳನ್ನು ಮಾರಿ ಆ ಹಣದಿಂದ ಹಡಗು ಹತ್ತಿ ಇಂಗ್ಲೆಂಡ್ ಗೆ ಪಯಣಿಸಿದರು. ಅಲ್ಲಿ ಸಮಾಜ ವಿಜ್ಞಾನ, ಮನಶ್ಶಾಸ್ತ್ರ, ಅರ್ಥಶಾಸ್ತ್ರ, ಆರೋಗ್ಯಶಾಸ್ತ್ರಗಳನ್ನು ಕಲಿತರು. ಭಾರತಕ್ಕೆ ಮರಳಿದ ನಂತರ ಹಲವಾರು ರಾಜಕೀಯ ನಾಯಕರೊಂದಿಗೆ    ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಮಾಜಸೇವೆ ಮಾಡುವ ಉದ್ದೇಶದಿಂದ ಸೇವಾದಳದ ಸದಸ್ಯೆಯಾದರು. ಗಾಂಧೀಜಿಯವರ ಪ್ರಿಯ ಶಿಷ್ಯೆಯಾದರು. ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಮಾಡಲು ಹೊರಟಾಗ ಮಹಿಳೆಯರನ್ನೂ ಸೇರಿಸಿಕೊಳ್ಳಬೇಕೆಂದು ವಾದಿಸಿದರು. ಆಕೆಯ ಒತ್ತಾಯಕ್ಕೆ ಕಟ್ಟುಬಿದ್ದು ಗಾಂಧೀಜಿಯವರು ಮಹಿಳೆಯರನ್ನು ಸೇರಿಸಿಕೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿ ಮಹಿಳೆಯರು ತೋರಿಸಿದ ಶ್ರದ್ಧೆಯನ್ನು ನೋಡಿ ಗಾಂಧೀಜಿಯವರು ತುಂಬಾ ಸಂತೋಷ ಪಟ್ಟರು.

ಸ್ವಾತಂತ್ರ್ಯ ಹೋರಾಟದಲ್ಲಿ ಎಂಥ ಕಷ್ಟ ಪರಿಸ್ಥಿತಿ ಬಂದರೂ ಕಮಲಾ ಎಲ್ಲವನ್ನೂ ಸಮರ್ಥವಾಗಿ ಎದುರಿಸಿದರು.‌ ಪುರುಷರಂತೆ ಹಲವಾರು ಬಾರಿ ಸೆರೆಮನೆಗೂ ಹೋಗಿ ಬಂದರು. ಸೆರೆಮನೆಯಲ್ಲಿ   ಎದುರಾದ ಯಾವುದೇ ಪ್ರತಿಕೂಲ ಪರಿಸ್ಥಿತಿಗೂ ಅವರು ಎದೆಗುಂದಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪೋಲೀಸರ ಲಾಠಿಗೂ ಹೆದರದೆ ಅವರು ಮುನ್ನುಗ್ಗಿದರು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ದೇಶವಿಭಜನೆಯ ಕಾಲದಲ್ಲಾದ  ಮತೀಯ ಕಲಹ, ಹಿಂಸೆ, ದೊಂಬಿಗಳು ಕಮಲಾರನ್ನು ಇನ್ನಿಲ್ಲದಂತೆ ನೋಯಿಸಿದವು. ಪಾಕಿಸ್ತಾನದಿಂದ ಬಲಾತ್ಕಾರವಾಗಿ ಎಳೆದು ತಂದ ಹೆಣ್ಣುಮಕ್ಕಳಿಗೆ ಭಾರತದಲ್ಲಿ ಪುನರ್ವಸತಿ ಕಲ್ಪಿಸಿ ಕೊಡಲು ಅವರು ತಮ್ಮಿಂದಾದ ಪ್ರಯತ್ನಗಳನ್ನು ಮಾಡಿದರು. ಅದಕ್ಕಾಗಿ ಗಾಂಧೀಜಿಯವರೊಡನೆ ಮಾತನಾಡಿ ಭೂಮಿಯನ್ನೊದಗಿಸಲು ಸರಕಾರಕ್ಕೆ ಶಿಫಾರಸು ಮಾಡಲು ಕೇಳಿಕೊಂಡರು. ನೆಹರೂರವರನ್ನು ಭೇಟಿಯಾದರು. ಮೊದಲಿಗೆ ‘ಇವೆಲ್ಲ ಬರೀ ಸೋಷ ಲಿಸ್ಟರ ರಮ್ಯಕಲ್ಪನೆಗಳು ‘ ಎಂದು  ತಮಾಷೆ ಮಾಡಿದ ನೆಹರೂ ಕೊನೆಗೆ ಕಮಲಾ ಯಶಸ್ಸು ಸಾಧಿಸಿದಾಗ ಅವರ ಸಂಕಲ್ಪ ಶಕ್ತಿಯನ್ನು ನೋಡಿ ಬೆರಗಾದರು.

ದುಂಡುಮೇಜಿನ ಪರಿಷತ್ತು ಮುಗಿದ ನಂತರ ದೇಶದಲ್ಲಿ ಎಲ್ಲೆಂದರಲ್ಲಿ ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ಜನರ ಬಂಧನ  ಅರಂಭವಾಯಿತು. ಕಮಲಾ ಅವರೂ ಬಂಧನಕ್ಕೊಳಗಾದರು. ಲಾಕಪ್  ಅಂತೂ ಬಂಧಿತರಿಂದ ತುಂಬಿ ಹೋಗಿತ್ತು. ತನಿಖೆ ಶುರುವಾದಾಗ ಕಮಲಾ ದಿಟ್ಟತನದಿಂದ ಉತ್ತರಿಸಿದರು. ಜೈಲಿನ ಅವ್ಯವಸ್ಥೆಯ ವಿರುದ್ಧ ದನಿಯೆತ್ತಿದರು. ಕಮಲಾರ ನಾಯಕತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ಜೈಲಿನಲ್ಲಿ ಅವರಿಗೆ ಜಾಂಡಿಸ್ ಆದಾಗ ಅವರು  ಅಲ್ಲೊಂದು ಪುಟ್ಟ ಆಸ್ಪತ್ರೆಯನ್ನೇ ತೆರೆದರು. ಹಿಂದೆ ಪಂಡಿತಾ ರಮಾಬಾಯಿ ಮತ್ತು ಅವರ ಮಗಳು ಮನೋರಮಾ ಜತೆಗೆ  ಕೆಲಸ ಮಾಡಿದ ಅನುಭವವು ಅವರಿಗೆ ಇಲ್ಲಿ ಪ್ರಯೋಜನಕ್ಕೆ ಬಂತು. ಆಸ್ಪತ್ರೆ ತೆರೆಯುವ ಮೂಲಕ ಎಷ್ಟೋ ಮಂದಿ ಮಹಿಳೆಯರನ್ನು ಅವರು ಅನಾರೋಗ್ಯದಿಂದ ರಕ್ಷಿಸಿದರು.

ಸೆರೆಮನೆಯಲ್ಲೇ ಇದ್ದುಕೊಂಡು ಜಯಪ್ರಕಾಶ್ ನಾರಾಯಣ್ ಮೊದಲಾದವರು ಕಟ್ಟಿದ ಸೋಷಲಿಸ್ಟ್ ಪಾರ್ಟಿಗೆ  ಕಮಲಾ ಸೇರಿಕೊಂಡರು. ಸಾಮಾಜಿಕ ಮತ್ತು ಆರ್ಥಿಕ ತಂಡಗಳು ಸಮುದಾಯದ ಸೇವೆಯಲ್ಲಿ ಪೂರ್ತಿಯಾಗಿ ಪಾಲ್ಗೊಳ್ಳುವಂತೆ ತಳಮಟ್ಟದಿಂದ ಕೆಲಸ ಮಾಡಲು ಅವರು ಮಂಗಳೂರಿಗೆ ಬಂದು ನೆಲೆಸಿದರು. ಗೇರು ಸಂಸ್ಕರಣಾ ಕಾರ್ಖಾನೆಗಳಲ್ಲಿ ಶೋಷಣೆಗೊಳಗಾಗಿದ್ದ ಕಾರ್ಮಿಕರ -ಮುಖ್ಯವಾಗಿ ಮಹಿಳಾ ಕಾರ್ಮಿಕರ  – ಪರವಾಗಿ ಯೂನಿಯನ್ ಕಟ್ಟಿ ನ್ಯಾಯ ಒದಗಿಸಲು ಅವರು ಹೆಣಗಾಡಿದರು.

ಕೊನೆಗೆ ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ-ಸನ್ಮಾನಗಳು ಒಲಿದು ಬಂದಾಗ ವಿನೀತರಾಗಿ ತಾವು ಇನ್ನೂ ಮಾಡಬೇಕಾದ ಕೆಲಸಗಳ ಬಗ್ಗೆ ಚಿಂತಿಸಿದರು.

ಗಾಂಧಿಜಿ ಮತ್ತು ಕಸ್ತೂರ್ಬಾ ಅವರ ಅನುರೂಪ    ದಾಂಪತ್ಯದ ಬಗ್ಗೆ ಕಮಲಾ ಅವರಿಗೆ ಅಪಾರ ಮೆಚ್ಚುಗೆಯಿತ್ತು. ಗಾಂಧಿಜಿಯವರು ಸದಾ ಅವರ ಆದರ್ಶವಾಗಿದ್ದರು. ತಾವು ಮಾಡಿದ ಸಾಧನೆಗಳು  ಅಥವಾ ದೊರೆತ ಹೆಸರು, ಕೀರ್ತೀ, ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಸ್ವಲ್ಪವೂ ವಿಚಲಿತರನ್ನಾಗಿಸಲಿಲ್ಲ.ಒ

‘ನೆನಪು ನೀಲಾಂಜನ’ ಕಮಲಾದೇವಿಯವರಿಗೆ ಅರ್ಪಿಸಿದ    ಒಂದು ನೆನಪಿನ ಕಾಣೆಕೆಯಂತಿದೆ. ಇಲ್ಲಿರುವ ವಿವರಗಳಿಗಿಂತಲೂ ವೈದೇಹಿಯವರು ಕೃತಿಯೊಳಗೆ ತುಂಬಿರುವ ಭಾವದ ಹೃದಯಸ್ಪರ್ಶಿ ಗುಣ  ನಮ್ಮ ಮನಸ್ಸನ್ನು ತಟ್ಟುತ್ತದೆ . ಕೆಲವೊಮ್ಮೆ    ವೈದೇಹಿಯವರ ಬರವಣಿಗೆಯ ಶೈಲಿಯೇ ಹಾಗೆ. ಗತ್ತು-  ಗಾಂಭೀರ್ಯ-ಔಪಚಾರಿಕತೆಗಳನ್ನು ಬದಿಗಿಟ್ಟು ಓದುಗರೊಂದಿಗೆ ಆಪ್ತವಾಗಿ  ಹತ್ತಿರ ಬಂದು ಮೆಲುದನಿಯಲ್ಲಿ   ಮಾತನಾಡುವಂತೆ  ಅವರು ಬರೆಯುತ್ತಾರೆ.    ಅಲ್ಲಿ  ಮುಗ್ಧ ಪ್ರಶ್ನೆಗಳಿವೆ,  ಪಿಸುಮಾತುಗಳೂ ಇವೆ.  ಸಾಂದರ್ಭಿಕವಾದ ಉದ್ಗಾರಗಳೂ ಇವೆ. ಅದ್ದರಿಂದಲೇ ಇಡೀ ಪುಸ್ತಕ ನವಿರಾಗಿ ಓದಿಸಿಕೊಂಡು ಹೋಗುತ್ತ ಕಮಲಾದೇವಿಯವರ ಆದರ್ಶ ವ್ಯಕ್ತಿತ್ವವನ್ನು ಸರಳ ಮಾತುಗಳಲ್ಲಿ ಕಟ್ಟಿ ಕೊಡುತ್ತದೆ.

-ಡಾ. ಪಾರ್ವತಿ ಜಿ.ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ

ಕೃತಿಯ ಹೆಸರು : ನೆನಪು ನೀಲಾಂಜನ
ಲೇಖಕಿ : ವೈದೇಹಿ
ಪ್ರ : ಅಕ್ಷರ ಪ್ರಕಾಶನ, ಸಾಗರ
ಪ್ರ.ವ : 2025

Tags: bookBook ReviewDr Parvathi AithalKannada LiteratureKarnataka News beatNenapu NeelanjanaShreeraj Vakwady
SendShareTweet
Previous Post

ಹಿಂಸಾಚಾರ ಪೀಡಿತ ಮಣಿಪುರಕ್ಕೆ ಸೆ.13ರಂದು ನರೇಂದ್ರ ಮೋದಿ ಭೇಟಿ !

Next Post

ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಆಹಾರ ಸೇವೆ ನೀಡಲು ಸರ್ಕಾರ ಸಜ್ಜು !

Related Posts

“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ

ತಾಜ್‌ ಮಹಲ್‌ ಗಿಂತಲೂ ಪ್ರಾಚೀನ ಪ್ರೇಮ ಮಂದಿರ “ಚಂಪಕ ಸರಸು !”
ಕನ್ನಡ-ಸಾಹಿತ್ಯ-ಸಂಸ್ಕೃತಿ

ತಾಜ್‌ ಮಹಲ್‌ ಗಿಂತಲೂ ಪ್ರಾಚೀನ ಪ್ರೇಮ ಮಂದಿರ “ಚಂಪಕ ಸರಸು !”

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ

88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಾನು ಮುಷ್ತಾಕ್ ಆಯ್ಕೆ

ಮಳೆಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಮತ್ತೆ ಸಿಲಿಕಾನ್ ಸಿಟಿ ಪ್ರವೇಶಿಸಿದ ಮಳೆರಾಯ

ಸಾಹಿತ್ಯದ ಮೂಲಕ ಸಮಾಜ ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿಎಂ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಸಾಹಿತ್ಯದ ಮೂಲಕ ಸಮಾಜ ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿಎಂ

Next Post
ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಆಹಾರ ಸೇವೆ ನೀಡಲು ಸರ್ಕಾರ ಸಜ್ಜು !

ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ವಿಶೇಷ ಆಹಾರ ಸೇವೆ ನೀಡಲು ಸರ್ಕಾರ ಸಜ್ಜು !

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌  

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

ʼಪಾಕಿಸ್ತಾನ್ ಜಿಂದಾಬಾದ್' ಕೂಗಿಸುವುದು ಕಾಂಗ್ರೆಸ್‌ ಸರ್ಕಾರದ ಅಜೆಂಡಾ : ವಿಜಯೇಂದ್ರ ಕೆಂಡಾಮಂಡಲ

ʼಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್‌ ಸರ್ಕಾರದ ಅಜೆಂಡಾ : ವಿಜಯೇಂದ್ರ ಕೆಂಡಾಮಂಡಲ

ಸಿಯಾಚಿನ್‌ ಹಿಮಪಾತ | ಮೂರು ಸೈನಿಕರು ಹುತಾತ್ಮ

ಸಿಯಾಚಿನ್‌ ಹಿಮಪಾತ | ಮೂರು ಸೈನಿಕರು ಹುತಾತ್ಮ

Recent News

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌  

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

ʼಪಾಕಿಸ್ತಾನ್ ಜಿಂದಾಬಾದ್' ಕೂಗಿಸುವುದು ಕಾಂಗ್ರೆಸ್‌ ಸರ್ಕಾರದ ಅಜೆಂಡಾ : ವಿಜಯೇಂದ್ರ ಕೆಂಡಾಮಂಡಲ

ʼಪಾಕಿಸ್ತಾನ್ ಜಿಂದಾಬಾದ್’ ಕೂಗಿಸುವುದು ಕಾಂಗ್ರೆಸ್‌ ಸರ್ಕಾರದ ಅಜೆಂಡಾ : ವಿಜಯೇಂದ್ರ ಕೆಂಡಾಮಂಡಲ

ಸಿಯಾಚಿನ್‌ ಹಿಮಪಾತ | ಮೂರು ಸೈನಿಕರು ಹುತಾತ್ಮ

ಸಿಯಾಚಿನ್‌ ಹಿಮಪಾತ | ಮೂರು ಸೈನಿಕರು ಹುತಾತ್ಮ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌

ಶೀಘ್ರದಲ್ಲೇ 3 ಸಾವಿರ ಲೈನ್‌ ಮನ್‌ ಶೀಘ್ರ ಪೂರ್ಣ : ಜಾರ್ಜ್‌  

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

ಸಿ.ಪಿ ರಾಧಕೃಷ್ಣನ್ ನೂತನ ಉಪ ರಾಷ್ಟ್ರಪತಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat