ದಾವಣಗೆರೆ : ರಂಜಾನ್ ಹಬ್ಬದಂದು ಅಲ್ಲಾಹನ ಮೇಲೆ ನಂಬಿಕೆ ಇದೆ. ಸರ್ವರಿಗೂ ಸಮಪಾಲು ಸಮಬಾಳು, ಎಲ್ಲಾರಿಗೂ ಸಾಮಾಜಿಕ ನ್ಯಾಯ ಸಿಗಲಿ ಎಂದು ಅಲ್ಲಾಹನಲ್ಲಿ ಬೇಡಿಕೊಳ್ಳುವೆ ಎಂದು ಜೆಡಿಎಸ್ ನಾಯಕ ಅಮಾನುಲ್ಲಾ ಖಾನ್ ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಕಗ್ಗಂಟು ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾನುಲ್ಲಾ ಖಾನ್,
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ಸುಲಭವಾಗಿ ತೀರ್ಮಾನ ಆಗುವ ಹಾಗೇ ಕಾಣುತ್ತಿಲ್ಲ. ಕಾಂಗ್ರೆಸ್ ಟಿಕೆಟ್ ವಿಚಾರ ಮತ್ತೆ ದೆಹಲಿಗೆ ಹೋಗಿದೆ. ಈಗಾ ಟಿಕೆಟ್ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಂಡರೆ 2028ರ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ನಾನು ಸಮಾಜದ ಪರ ಪಕ್ಷಾತೀತವಾಗಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ನಿರಂತರವಾಗಿ ಆ ಕುಟುಂಬಕ್ಕೆ ಅಧಿಕಾರ ನೀಡಿದ್ದು ನಮ್ಮ ಸಮಾಜ. ಜನರ ಕಣ್ಣಿಗೆ ಬಟ್ಟೆ ಕಟ್ಟಿ ರಾಜಕೀಯ ಮಾಡಿದ್ದಾರೆ. ಈಗ ನ್ಯಾಯ ಕೇಳಿ ಪಡೆಯುವ ಸಂದರ್ಭ ಬಂದಿದೆ ಎಂದು ಪರೋಕ್ಷವಾಗಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ನಾಳೆ ಸಭೆ ಸೇರಿ ನಮ್ಮ ತೀರ್ಮಾನ ಮಾಡ್ತೇವೆ. ಸಮಾಜಕ್ಕೆ ಅನುಕೂಲ ಆಗಲಿ ಅಂತಾ ಪಕ್ಷದ ವಿರುದ್ಧ ನಡೆ ತೋರಿಸಿದ್ದೇನೆ. ಸಮಾಜಕ್ಕೆ ನ್ಯಾಯ ಸಿಗಬೇಕಂದ್ರೆ ಮುಸ್ಲಿಂರು ಪಥ ಬದಲಿಸಬೇಕು. ರಾಜಕೀಯ ಬದಲಾವಣೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.ಇಲ್ಲಿ ಎಡವಿದ್ರೆ 2028ಕ್ಕೆ ಜನ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಜೆಡಿಎಸ್ ನಾಯಕ ಅಮಾನುಲ್ಲಾ ಖಾನ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ.. ಅಪಾಯದ ನಡುವೆಯೇ ಸಂಚಾರ ಆರಂಭಿಸಿದ ಭಾರತೀಯ LPG ಟ್ಯಾಂಕರ್ಗಳು!



















