ಮಂಡ್ಯ : ಆಸ್ತಿ ವಿಚಾರಕ್ಕೆ ದಾಯಾದಿ ಕುಟುಂಬದ ನಡುವೆ ಕಲಹ ನಡೆದಿದ್ದು, ಚಿಕ್ಕಪ್ಪನ ಕೊಲೆಯಲ್ಲಿ ಜಗಳ ಅಂತ್ಯಗೊಂಡಿರುವ ಘಟನೆ ಮಂಡ್ಯದ ಪಾಂಡವಪುರದ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಾಡೆ ಗ್ರಾಮದ ಕೃಷ್ಣೇಗೌಡ (61) ಕೊಲೆಯಾದ ದುರ್ದೈವಿ. ಕಲಹದಲ್ಲಿ ಮತ್ತೊಂದು ದಾಯಾದಿ ಕುಟುಂಬದ ಸುನಿತಾ, ಕಿರಣ,ರಾಜು ಹಲ್ಲೆಗೈದವರು. ಜಗಳ ನಡೆಯುತ್ತಿರುವಾಗಲೇ ಕೃಷ್ಣೇಗೌಡ ಕುಸಿದು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಪತ್ನಿಗೆ ಜಾತಿ ನಿಂದನೆ, ದೈಹಿಕ ಕಿರುಕುಳ ಆರೋಪ | ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದ ಟೆಕ್ಕಿ ಪತಿ



















