ಶಿವಮೊಗ್ಗ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವನನ್ನು ಸಾಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಗರದ ಕಾರ್ಗಲ್ ನಿವಾಸಿ ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಭಾರತ ಪಾಕ್ ಯುದ್ಧ ಶುರುವಾಗಿ ಕದನ ವಿರಾಮದ ಬೆನ್ನಲ್ಲೇ ಮೋದಿ ವಿರುದ್ಧ ಪೋಸ್ಟ್ ಮಾಡಿದ್ದ. ಆರೋಪಿ ಶಕೀರ್ ಹುಸೇನ್ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಅವರ ಆದೇಶದ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಶಕೀರ್ ಹುಸೇನ್ ಕಾರ್ಗಲ್ ನ ಮಂದಾರ ಕಫರ್ಟ್ ಎಂಬ ಹೋಟೆಲ್ ಮಾಲೀಕನಾಗಿದ್ದಾನೆ.