ಬೆಂಗಳೂರು: ಮಳೆಯಿಂದಾಗಿ ನಲುಗಿ ಹೋಗಿರುವ ಸಾಯಿ ಲೇಔಟ್ ಗೆ ಮಹಾದೇವಪುರ ವಲಯ ಆಯುಕ್ತ ಕೆ.ಎನ್. ರಮೇಶ್ ಭೇಟಿ ನೀಡಿದ್ದಾರೆ.
ಭೇಟಿ ಮಾಡಿ ಸದ್ಯದ ಸ್ಥಿತಿಗತಿ ಬಗ್ಗೆ ವಲಯ ಆಯುಕ್ತ ರಮೇಶ್ ಮಾಹಿತಿ ಪಡೆದಿದ್ದಾರೆ. ಈ ವೇಳೆ ಜನರ ಸಮಸ್ಯೆ ಆಲಿಸಿ ಕಾಗಕ್ಕ, ಗೂಬಕ್ಕನ ಕಥೆ ಹೇಳಿದ್ದಾರೆಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಈ ವಲಯಕ್ಕೆ ಬಂದು ಒಂದು ವರ್ಷವಷ್ಟೇ ಆಗಿದೆ. ಹಿಂದಿನದ್ದು ಏನಾಗಿದೆ ಅಂತ ನನಗೆ ಗೊತ್ತಿಲ್ಲ. ಹೋದ ವರ್ಷವೂ ಇದೇ ರೀತಿ ಪ್ರವಾಹ ಉಂಟಾಗಿತ್ತು. ಸಾಯಿ ಲೇಔಟ್ ಪ್ರವಾಹಕ್ಕೆ ರೈಲ್ವೇ ಕಾಮಗಾರಿಯೇ ಕಾರಣ ಎಂದಿದ್ದಾರೆ.
ರೈಲ್ವೇ ಕಾಮಗಾರಿ ನಡೆಯುತ್ತಿರುವುದರಿಂದ ನೀರು ರಿವರ್ಸ್ ಹರಿಯುತ್ತಿದೆ. ಹೀಗಾಗಿ ಸಾಯಿಲೇಔಟ್ ನಲ್ಲಿ ಪ್ರತಿ ವರ್ಷ ಪ್ರವಾಹ ಉಂಟಾಗುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ರೈಲ್ವೇ ಅಧಿಕಾರಿಗಳ ಜೊತೆ ಸಭೆ ಮಾಡುತ್ತಿದ್ದೇವೆ. ಸದ್ಯಕ್ಕೆ ನೀರು ತೆರವು ಸೇರಿದಂತೆ ತಾತ್ಕಾಲಿಕ ಪರಿಹಾರ ನೀಡುವತ್ತ ಗಮನ ಹರಿಸುತ್ತಿದ್ದೇವೆ ಎಂದಿದ್ದಾರೆ.