ದಾವಣಗೆರೆ: ಕೇಂದ್ರ ಸರ್ಕಾರ ದೇಶದ ಜಾತಿ ಜನಗಣತಿ ಆಗಬೇಕು ಎಂದು ಘೋಷಣೆ ಮಾಡಿದ್ದು ಸ್ವಾಗತರ್ಹ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದ ಜನಗಣತಿ ಇದುವರೆಗೂ ಆಗಿರಲಿಲ್ಲ. ನರೇಂದ್ರ ಮೋದಿಯವರು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಯಾವುದೇ ವರ್ಗಕ್ಕೆ ಅನ್ಯಾಯವಾಗದ ರೀತಿ ಜಾತಿಗಣತಿಗೆ ಮುಂದಾಗಿದ್ದಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇವಲ ರಾಜ್ಯಕ್ಕೆ ಮಾತ್ರ ಇರೋದು ರಾಜ್ಯ ಸರ್ಕಾರಕ್ಕೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಓಟ್ ಬ್ಯಾಂಕ್ ಗಾಗಿ ಸ್ವಾರ್ಥಕ್ಕಾಗಿ ಜಾತಿ ಜನಗಣತಿ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಕಾಂತರಾಜ್ ಅಯೋಗದ ಮೂಲ ಪ್ರತಿಯೇ ಕಾಣಿಯಾಗಿದೆ, ಮೊದಲು ಅದನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಮನೆಯಲ್ಲೇ ಜಯಪ್ರಕಾಶ್ ಹೆಗಡೆಯವರನ್ನು ಕೂರಿಸಿ, ಯಾವುದೇ ಮನೆಗೆ ಹೋಗದೆ ಜಾತಿಗಣತಿ ವರದಿ ಸಿದ್ದಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಜಾತಿಜನಗಣತಿ ವಿರೋಧಿಯಲ್ಲ ಆದರೆ ಅದು ವೈಜ್ಞಾನಿಕವಾಗಿರಬೇಕು ಎನ್ನುತ್ತೇವೆ. ಜಾತಿ ಜನಗಣತಿ ವರದಿಯು ಕಳೆದು ಹೋಗಿದ್ಯೋ ಇಲ್ಲ ಇವರೇ ಬಚ್ಚಿಟ್ಟಿದ್ದಾರೋ ಗೋತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಖರ್ಗೆ ಮಾತಿಗೆ ಎಂಪಿ ರೇಣುಕಾಚಾರ್ಯ ವ್ಯಂಗ್ಯ
ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದಲ್ಲಿ ಮೋದಿ ಗಾಯಬ್ ಎಂದು ಪೋಸ್ಟ್ ಮಾಡಿದ್ದರ ಕುರಿತು ಮಾತನಾಡಿ, ಪೋಸ್ಟ್ ಮಾಡಿ ಅನಂತರ ಸಾರ್ವಜನಿಕರು ಅಕ್ರೋಶ ಹೊರಹಾಕುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಸರ್ಕಾರದ ಪರವಾಗಿ ನಾವು ಇದ್ದೇವೆ ಎನ್ನುತ್ತಾರೆ. ಆದರೆ ಸಿಎಂ ಹಾಗೂ ಸಚಿವರು ಭದ್ರತಾ ವೈಫಲ್ಯ ಎನ್ನುತ್ತಾ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂತೋಷ್ ಲಾಡ್ ಗೆ ರೇಣುಕಾಚಾರ್ಯ ವಾರ್ನಿಂಗ್
ಜಮ್ಮು ಕಾಶ್ಮೀರದ ಪಹಲ್ಗಾಮ್ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಮಾತನಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಮಾತನಾಡಿ, ಸಂತೋಷ್ ಲಾಡ್ ಅವರ ಪದಬಳಕೆ ಸರಿಯಾಗಿಲ್ಲ. ಶಬ್ದಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಲಿ ಎಂದು ಹೇಳಿದ್ದಾರೆ.