ವಿಜಯಪುರ: ಮಹಮ್ಮದ್ ಪೈಗಂಬರ್ ಬಗ್ಗೆ ಯತ್ನಾಳ್ ಮಾತನಾಡಿದ್ದು ದೊಡ್ಡ ತಪ್ಪು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಗುರು ಬಗ್ಗೆ ಯಾರು ಕೂಡ ಮಾತನಾಡಬಾರದು ಎಂದು ತಿಳಿಸಿದ್ದಾರೆ.
ಅಲ್ಪ ಸಂಖ್ಯಾತರಿಂದ ಯತ್ನಾಳ್ ವಿರುದ್ಧ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಶಾಸಕ ಯತ್ನಾಳ್ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದು ತಪ್ಪು. ವಕೀಲ ಖಾದ್ರಿ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಾರದಿತ್ತು. ಅದನ್ನು ನಾನು ಡಿಫೆಂಡ್ ಮಾಡಲ್ಲ.ತಂದೆಯ ಬಗ್ಗೆ ಯಾರು ಕೂಡ ಮಾತನಾಡಬಾರದು. ಶಾಸಕ ಯತ್ನಾಳ್ ರನ್ನು ಪಕ್ಷ ಉಚ್ಚಾಟನೆ ಮಾಡಿದರೂ ಯತ್ನಾಳಗೆ ಬುದ್ಧಿ ಬಂದಿಲ್ಲ. ಎಲುಬು ಇಲ್ಲದ ನಾಲಿಗೆ ಅಂತಾ ಏನಬೇಕಾದರೂ ಮಾತನಾಡಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಉಗ್ರರಿಗೆ ಯತ್ನಾಳ್ ಏನು ಬೇಕಾದರೂ ಬೈಯ್ಯಲಿ. ಆದರೆ, ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಹೇಳಿದ್ದಾರೆ.