ಉತ್ತರ ಪ್ರದೇಶ : ಹಿಂದು ವೈದ್ಯೆಯನ್ನು ಪುಸಲಾಯಿಸಿ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಅನ್ಯಕೋಮಿನ ವೈದ್ಯನನ್ನು ಸೇವೆಯಿಂದ ಅಮಾನತು ಮಾಡಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿಸಿದೆ.
ಡಾ.ರಮೀಜುದ್ದೀನ್ ಮಲಿಕ್ ಸೇವೆಯಿಂದ ಅಮಾನತಾದ ವೈದ್ಯ. ಈತ ತನಗಾದ ಮೊದಲ ಮದುವೆಯನ್ನು ಮರೆಮಾಡಿ ಹಿಂದು ಮಹಿಳಾ ವೈದ್ಯೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದ. ಮಹಿಳೆಯು ಮಲಿಕ್ನ ಮೊದಲ ವಿವಾಹದ ಬಗ್ಗೆ ತಿಳಿದು, ತನಗಾದ ಮೋಸದ ಬಗ್ಗೆ ಸಿಎಂ ಯೋಗಿ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಮೊದಲ ಪತ್ನಿಯೂ ಹಿಂದುವಾಗಿದ್ದು, ಆಕೆಯನ್ನೂ ಮತಾಂತರಿಸಿದ್ದಾನೆ. ಸಂತ್ರಸ್ತೆ ಮಹಿಳೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇಂದು ಭೇಟಿಯಾದರು. ಇತ್ತ, ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಪರ್ಣಾ ಯಾದವ್ ಅವರು ಪ್ರಕರಣವನ್ನು ಖಂಡಿಸಿದ್ದಾರೆ. ಕೆಜಿಎಂಯುನಲ್ಲಿನ ಹಿರಿಯ ವೈದ್ಯರು ಜೂನಿಯರ್ ವೈದ್ಯರೊಂದಿಗೆ ಲವ್ ಜಿಹಾದ್ನಲ್ಲಿ ತೊಡಗಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣಕ್ಕಾಗಿ ಜೂನಿಯರ್ ವೈದ್ಯರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ ಸಂಗತಿಯೂ ಬಯಲಾಗಿದೆ.
ಇದನ್ನೂ ಓದಿ : ದಾಖಲೆ ಮಟ್ಟಕ್ಕೇರಿದ ಚಿನ್ನದ ಬೆಲೆ | 10ಗ್ರಾಂಗೆ ಎಷ್ಟು ಗೊತ್ತಾ?



















