ಧಾರವಾಡ : ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ರಾಜಶೇಖರ ಬಿಜಾಪುರಗೆ ಲೋಕಾ ಶಾಕ್ ಕೊಟ್ಟಿದೆ. ನಗರದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿ ಅವರ ಮನೆಯಿದ್ದು, ಸದ್ಯಕ್ಕೆ ಬೆಳಗಾವಿ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ ಅವರು ಈ ಮುಂಚೆ ಧಾರವಾಡದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.
ಧಾರವಾಡದಲ್ಲಿಯೇ ಮೂರು ಕಡೆ ದಾಳಿ ಮಾಡಿದ್ದು, ರಾಣಿ ಚೆನ್ನಮ್ಮ ನಗರದಲ್ಲಿರುವ ಖಾಸಗಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿಯಾಗಿದೆ. ಏಕ ಕಾಲಕ್ಕೆ ಮೂರು ಕಡೆ ದಾಳಿ ಮಾಡಿದ್ದು, ಒಟ್ಟು ಆರು ಲೋಕಾ ಅಧಿಕಾರಿಗಳ ಕಾರ್ಯಾಚರಣೆ ಆಗುತ್ತಿದೆ.
ಇದನ್ನೂ ಓದಿ : ಐಪಿಎಲ್ ಹರಾಜಿಗೆ ಮುನ್ನ ಅಬ್ಬರಿಸಿದ ಕಿವೀಸ್ ಬ್ಯಾಟರ್ : ಬಿಬಿಎಲ್ನಲ್ಲಿ ಟಿಮ್ ಸೀಫರ್ಟ್ ಸ್ಫೋಟಕ ಶತಕ



















