ಬೆಂಗಳೂರು: ಒಬಿಸಿ ಆಯೋಗ ಗಣತಿ ವರದಿ ಕೊಟ್ಟಿದ್ದು, ಅದನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ ಎಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದರು. ಎಲ್ಲರೂ ಸಮಾನರೆಂದು ಅವರು ಸಾರಿದ್ದರು.
ಹೆಣ್ಣುಮಕ್ಕಳಿಗೂ ಪುರುಷರಷ್ಟೇ ಸ್ಥಾನಮಾನ ನೀಡಿದ್ದರು. ಅಸ್ಪೃಷ್ಯತೆ ಆಚರಣೆ ಬಗ್ಗೆ ಧ್ವನಿ ಎತ್ತಿದ್ದರು. ಹೀಗಾಗಿ ಎಲ್ಲಾ ವರ್ಣಗಳ ಜನ ಬಸವಣ್ಣನವರನ್ನು ಒಪ್ಪಿದ್ದರು ಎಂದಿದ್ದಾರೆ.
ಲಿಂಗಾಯತ, ವೀರಶೈವ ಎರಡೂ ಒಂದೇ. ಲಿಂಗಾಯತ ಸ್ವತಂತ್ರ್ಯ ಧರ್ಮ ಅಂತ ಮಾಡಬೇಕೆಂದು ಮಹಸಭಾ ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ. 1955ರ ಹಿಂದೂ ಕೋಡ್ ಬಿಲ್ ಇದೆ. ನಾಲ್ಕು ಕಾನೂನುಗಳಲ್ಲಿ ಹಿಂದು ಎಂದು ಪರಿಗಣಿಸಲಾಗಿದೆ. 2011ರ ಜನಗಣತಿಯಲ್ಲೂ ಹಿಂದು ಎನ್ನಲಾಗಿದೆ. ಲಿಂಗಾಯತ ಹಿಂದೂ ಧರ್ಮದ ಪಂಥ ಎಂದಿದೆ. ಆದರೆ ಲಿಂಗಾಯತ ಎನ್ನುವುದು ಒಂದು ಪಂಥ. ಲಿಂಗಾಯತ ಅನ್ನುವುದು ಒಂದು ಧರ್ಮವಲ್ಲ. ಸದ್ಯಕ್ಕೆ ಅದನ್ನು ಒಂದು ಪಂಥ ಅಂತ ಹೇಳ್ತೀನಿ ಎಂದಿದ್ದಾರೆ.
ವೃತ್ತಿ ಆಧಾರಿತವಾಗಿ 99 ಜಾತಿಗಳಿವೆ. ಲಿಂಗಾಯತ ಪಂಥದಲ್ಲಿ 99 ಪಂಡಗಳಿವೆ. ಹಿಂದೂವಿನ ಬಹಳಷ್ಟು ಜಾತಿ ಲಿಂಗಾಯತದಲ್ಲಿವೆ. ಲಿಂಗಾಯತರನ್ನು ಜಾತಿ ಅಂತ ಪರಿಗಣಿಸಲು ಸಾಧ್ಯವಿಲ್ಲ. ಇದೊಂದು ಪ್ರತ್ಯೇಕವಾದ ಪಂಥ. ಒಬಿಸಿ ಜಾತಿಗಳನ್ನು 3 ವಿಭಾಗಗಳಾಗಿ ಜಯಪ್ರಕಾಶ್ ಹೆಗ್ಡೆ ಆಯೋಗ ವಿಂಗಡಿಸಿದೆ. ಪ್ರವರ್ಗ 1 ರಲ್ಲಿ ಅತ್ಯಂತ ಹಿಂದುಳಿದ ವರ್ಗ ಸೇರಿಸಿದ್ದಾರೆ. ಇದರಲ್ಲಿ ಪ್ರ ವರ್ಗ 1-ಎ ಮತ್ತು ಪ್ರವರ್ಗ 1 – ಬಿ ಮಾಡಿದ್ದಾರೆ ಎಂದಿದ್ದಾರೆ.
ಹೆಳವ, ಉಪ್ಪಾರ, ಹಾವಾಡಿಗ ಪ್ರವರ್ಗ 1 ಎನಲ್ಲಿ ಹಾಕಿದ್ದಾರೆ. ಸುಣಗಾರ ಲಿಂಗಾಯತ, ಬೇಡ ಜಂಗಮ, ಉಪ್ಪಾರ ಲಿಂಗಾಯತರನ್ನು 3ಬಿಗೆ ಸೇರಿಸಿದ್ದಾರೆ. ಹಿಂದೂ ಭೇವಿ, ಲಿಂಗಾಯತ ಭೋವಿಗಳಿದ್ದಾರೆ. ಇವರನ್ನೂ ಬೇರೆ ಪ್ರವರ್ಗಕ್ಕೆ ಸೇರಿಸಲಾಗಿದೆ. ಈ ರೀತಿ ಮಾಡಿರುವುದು ಸಂಪೂರ್ಣ ತಪ್ಪು. ಕೆಲವು ಸಮುದಾಯಗಳನ್ನು ಪ್ರ ವರ್ಗ 1ಕ್ಕೆ ಸೇರಿಸಬೇಕು. ಈ ಕುರಿತು ಸುಪ್ರೀಂ ತೀರ್ಮಾನವೂ ಇದೆ. ಹಿಂದೂ ಗಾಣಿಗ, ಲಿಂಗಾಯತ ಗಾಣಿಗ ಒಂದೇ ಎಂದಿದೆ. ಈ ತಾರತಮ್ಯವನ್ನು ಸರಿಪಡಿಸಬೇಕು ಎಂದಿದ್ದಾರೆ.
ಹಾವನೂರು, ಚಿನ್ನಪ್ಪ ರೆಡ್ಡಿ ಆಯೋಗಳಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಆಗಿದೆ. ಹಾವನೂರು ಆಯೋಗ ಜಾತಿ ಅಂತ ಪರಿಗಣಿಸಿದೆ. ಲಿಂಗಾಯತ ಅನ್ನುವುದು ಜಾತಿಯಲ್ಲ. ಲಿಂಗಾಯತ ಅನ್ನುವುದು ಒಂದು ಪಂಥ ಎಂದಿದ್ದಾರೆ.