ಚಾಮರಾಜನಗರ: “ಜೀವನದಿ ಕಾವೇರಿ ” ಸಾಕ್ಷ್ಯ ಚಿತ್ರದ ಕನ್ನಡ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿದ್ದು, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಬಿಡುಗಡೆ ಮಾಡಿದ್ದಾರೆ.
ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಗಳ ಅಪೂರ್ವ ಜೀವ ವೈವಿಧ್ಯತೆ, ಸುಂದರ ಭೂ ದೃಶ್ಯಗಳ ಮಹತ್ವ ಸಾರುವ ಸಾಕ್ಷ್ಯಚಿತ್ರ, ನಿಸರ್ಗದ ನಿಗೂಢ ವಿಸ್ಮಯಗಳನ್ನು ತೆರೆದಿಡುತ್ತದೆ.
ಇದು ಸಂಪೂರ್ಣ ವಾಣಿಜ್ಯೇತರ ಚಿತ್ರವಾಗಿದ್ದು, ಉಚಿತ ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿದೆ. ಈ ಸಾಕ್ಷ್ಯ ಚಿತ್ರವನ್ನು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಹೊಳೆಮತ್ತಿ ನೇಚರ್ ಫೌಂಡೇಷನ್ ಹೊರತಂದಿದೆ.
“ಜೀವನದಿ ಕಾವೇರಿ” ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿ ಚಾಮರಾಜನಗರದಲ್ಲಿ ಏಪ್ರಿಲ್ 5 ರಂದು ಪ್ರಥಮ ಪ್ರದರ್ಶನ ಕಾಣಲಿದೆ. ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳ ಸಂರಕ್ಷಣೆಗೆ ಹೆಚ್ಚಿನ ಗಮನ ಸೆಳೆಯುವುದಕ್ಕಾಗಿ ಈ ಸಾಕ್ಷ್ಯ ಚಿತ್ರ ಸಿದ್ದಪಡಿಸಲಾಗಿದೆ ಎಂದು ಡಾ. ಸಂಜಯ್ ಗುಬ್ಬಿ ಹೇಳಿದ್ದಾರೆ.