ದಾವಣಗೆರೆ: ಜಾತಿ ಗಣತಿ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ. ಹೀಗಾಗಿ 7 ಜನ ಲಿಂಗಾಯತ ಸಚಿವರು ಮೊದಲು ರಾಜೀನಾಮೆ ಕೊಡಲಿ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಜಾರಿಗೆ ತರಬಾರದು. ಬಹಳ ಗೊಂದಲವಾಗಿದೆ. ಇನ್ನೂ ಎರಡು ಮೂರು ದಿನದಲ್ಲಿ ನಾನು ನನ್ನ ಕ್ಷೇತ್ರದ ಜಾತಿವಾರು ಜನಸಂಖ್ಯೆ ಮಾಹಿತಿ ನೀಡುತ್ತೇನೆ. ನಾಳೆ ಸಿಎಂ ಚರ್ಚೆ ಮಾಡಲಿ ಆದರೆ, ಜಾರಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಲಿಂಗಾಯತ ಸಮಾಜದ ಪರ ಶಾಮನೂರು ನಿಂತಿದ್ದಾರೆ. ಡಿ.ಕೆ. ಶಿವಕುಮಾರ್ ಸಭೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ನಾವು ಮೆಚ್ಚುತ್ತೇವೆ. ಎಲ್ಲರಿಗೂ ಸರ್ಕಾರ ಉರುಳಿಸಲು ಆಗುವುದಿಲ್ಲ. ಲಿಂಗಾಯತರಿಗೆ ಅವಮಾನವಾಗುತ್ತಿದ್ದರೂ 7 ಜನ ಲಿಂಗಾಯತ ಸಚಿವರು ಇಲ್ಲಿಯವರೆಗೂ ಒಂದೇ ಒಂದು ಸಭೆ ಕರೆದಿಲ್ಲ. ಅವರ ಕೈಯಲ್ಲಿ ಏನೂ ಕ್ಯಾಪಸಿಟಿ ಇಲ್ಲ. ನಾನು ಈಶ್ವರ್ ಖಂಡ್ರೆ ಗೆ ಕಾಲ್ ಮಾಡಿದರೆ, ರಿಸೀವ್ ಮಾಡುತ್ತಿಲ್ಲ. ಎಲ್ಲರೂ ಅವರ ಸ್ವಾರ್ಥಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಕೂಡಲೇ ಲಿಂಗಾಯತ ಸಚಿವರು ಸ ಭೆ ಕರೆಯಬೇಕು ಎಂದು ಮನವಿ ಮಾಡಿದ್ದಾರೆ.