ನೈಸ್ ರಸ್ತೆಯಲ್ಲಿ ವಕೀಲರೊಬ್ಬರ ಶವ ಪತ್ತೆಯಾಗಿರುವ ವಿಷಯವಾಗಿ ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಸಂಜೆ 7:52 ರ ಸುಮಾರಿಗೆ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ಮೃತದೇಹ ಸಿಕ್ಕ ಬಗ್ಗೆ ಮಾಹಿತಿ ಬಂತು. ಜಗದೀಶ್ ಮೂಲತಃ ಮಂಡ್ಯದ ಮಳವಳ್ಳಿಯವರು. ವಕೀಲ ವೃತ್ತಿ ಮಾಡುತ್ತಿದ್ದರು. ಸದ್ಯ ಬೆಂಗಳೂರಿನ ಉಲ್ಲಾಳದಲ್ಲಿ ವಾಸವಿದ್ದಾರೆ. ಅವರ ಸಂಬಂಧಿಕರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೈ ವೇ ಪಕ್ಕದಲ್ಲಿ ವೆಹಿಕಲ್ ನಿಂತಿತ್ತು. ಪಾರ್ಕಿಂಗ್ ಲೈಟ್ ಕೂಡ ಆನ್ ಇತ್ತು. ಕಾರಿನಿಂದ 100 ಮೀಟರ್ ದೂರದಲ್ಲಿ ಮೃತದೇಹ ಸಿಕ್ಕಿದೆ. ಸ್ಥಳದಲ್ಲಿ ಯಾವುದೇ ಶಾರ್ಪ್ ವೆಪನ್ ಅಸಲ್ಟ್ ಇಲ್ಲ. ಕಾರಿನಲ್ಲಿ ಎರಡು ಸೈಡ್ ಡೆಂಟ್ ಮಾರ್ಕ್ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ.