ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶಾಸಕ ಸಿ.ಟಿ. ರವಿ, ಅಶ್ಲೀಲ ಪದ ಬಳಕೆ ಮಾಡಿರುವ ಪ್ರಕರಣ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಸಂಘರ್ಷಕ್ಕೆ ಕಾರಣವಲಾಗುತ್ತಿದೆ. ಈಗಾಗಲೇ ಸರ್ಕಾರವು ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಈ ಬೆನ್ನಲ್ಲೇ ಈಗ ವಿಧಾನ ಪರಿಷತ್ ಸಭಾಪತಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳ ಮಹಜರು ನಡೆಸುವ ಕುರಿಚು ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಸೆಕ್ರೇಟರಿ, ಕಾನೂನು ಪಂಡಿತರು ಚರ್ಚೆ ಮಾಡುತ್ತಿದ್ದೇವೆ. ನಾವು ಪೊಲೀಸರಿಗೆ ಎರಡು ದೂರು ಕೊಟ್ಟಿದ್ದೆವು. ಸಿಐಡಿ ನಮ್ಮ ವ್ಯಾಪ್ತಿಯಲ್ಲಿ ಬರಲ್ಲ, ನಮ್ಮ ಕಾನೂನು ವ್ಯಾಪ್ತಿ ಬಿಟ್ಟು ನಾವು ಏನೂ ಮಾಡಲ್ಲ ಎಂದು ಹೇಳಿದ್ದಾರೆ.
ಅಡ್ವೋಕೆಟ್ ಜನರಲ್ ಮಾತನಾಡಿದ್ದು, ನಮ್ಮ ಅಧಿಕಾರಿಗಳನ್ನು ಕಳುಹಿಸಿ ಮಹಜರಿಗೆ ಅವಕಾಶ ನೀಡಬೇಕಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಮತ್ತೊಂದು ದೂರು ನೀಡಿಲ್ಲ. ಕೊಟ್ಟರೆ ನಾವು ಅದನ್ನು ಕನ್ಸಿಡರ್ ಮಾಡುತ್ತೇವೆ ಎಂದಿದ್ದಾರೆ.
ಎರಡು ಕಡೆ ಯೋಚನೆ ಮಾಡಬೇಕು, ಲಕ್ಷ್ಮೀ ಹೆಬ್ಬಾಳಕರ್ ಒಬ್ಬ ಮಂತ್ರಿ ಅಲ್ಲ. ಮಹಿಳೆಯಾಗಿ ನಾವು ನೋಡಬೇಕು. ಅದಲ್ಲದೇ ಸಿಟಿ ರವಿ ಅವರನ್ನು ಅಮಾನುಷವಾಗಿ ತೆಗೆದುಕೊಂಡು ಹೋಗಿದ್ದು ತಪ್ಪು. ಅವರು ಕೂಡ ಸದಸ್ಯರು ಎಂದು ಹೊರಟ್ಟಿ ಹೇಳಿದ್ದಾರೆ.
ರೂಲಿಂಗ್ ಕೊಟ್ಟು ಕ್ಲೋಸ್ ಮಾಡಿದ್ದೇವೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಂದು ಕೇಸ್ ಕೊಟ್ಟಿದ್ದಾರೆ. ಅದರ ಮೇಲೆ ಕೇಸ್ ಆಗಿದೆ. ಕಲಾಪ ಮುಂದೂಡಿದರೂ ಅದು ವಿಧಾನ ಪರಿಷತ್ ಆಗಿರುತ್ತದೆ. ಅಲ್ಲಿ ಏನೇ ಆದರೂ ನಮ್ಮ ಅನುಮತಿ ಪಡೆಯಬೇಕು. ಅದು ನಮ್ಮ ಕಸ್ಟಡಿಯೊಳಗಿರುತ್ತದೆ ಎಂದು ಹೊರಟ್ಟಿ ಹೇಳಿದ್ದಾರೆ.
ನಾನು ಕೂಡಾ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದೇನೆ. ಹೆಬ್ಬಾಳ್ಕರ್ ಮನಸ್ಸಿಗೆ ನೋವಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ.