ಬೆಂಗಳೂರು: ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ, ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸುವುದು, ಆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ಕುಸುಮ್-ಸಿ ಯೋಜನೆ ಸಿದ್ಧಪಡಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-Kusum)ಯೋಜನೆಯ ಒಂದು ಭಾಗವಾಗಿದೆ.ಜೂನ್ 11 ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕುಸುಮ್-ಸಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಆ ಮೂಲಕ ಯೋಜನೆಯಿಂದ ರೈತರಿಗೆ ಹಲವು ರೀತಿಯ ಪ್ರಯೋಜನಗಳು ಲಭ್ಯವಾಗಲಿವೆ.
ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಿಡ್-ಸಂಪರ್ಕಿತ ಕೃಷಿ ಪಂಪ್ ಗಳನ್ನು ಸೌರೀಕರಣಗೊಳಿಸಲು ಯೋಜನೆಯು ಅನುವು ಮಾಡಿಕೊಡುತ್ತದೆ. ರೈತರು ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಿದ್ಯುತ್ ವಿತರಣಾ ಕಂಪನಿಗಳಿಗೆ ಹೆಚ್ಚುವರಿ ಸೌರಶಕ್ತಿಯನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ. ಇದು ವೈಯಕ್ತಿಕ ಪಂಪ್- ಮಟ್ಟದ ಸೌರೀಕರಣ ಮತ್ತು ಫೀಡರ್ ಮಟ್ಟದ ಸೌರೀಕರಣ ಎರಡನ್ನೂ ಬೆಂಬಲಿಸುತ್ತದೆ. ಅಲ್ಲಿ ಒಂದೇ ಸೌರ ವಿದ್ಯುತ್ ಸ್ಥಾವರವು ಬಹು ಪಂಪ್ ಗಳಿಗೆ ಶಕ್ತಿ ನೀಡುತ್ತದೆ.
ರೈತರು ವಿದ್ಯುತ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಿದ್ಯುತ್ ವಿತರಣ ಕಂಪನಿಗಳಿಗೆ ಹೆಚ್ಚುವರಿ ಸೌರಶಕ್ತಿಯನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಗುರಿ ಹೊಂದಿದೆ. ಇದು ವೈಯಕ್ತಿಕ ಪಂಪ್ ಮಟ್ಟದ ಸೌರೀಕರಣ ಮತ್ತು ಫೀಡರ್ ಮಟ್ಟದ ಸೌರೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಸೌರ ವಿದ್ಯುತ್ ಸ್ಥಾವರದಿಂದ ಪಂಪ್ಸೆಟ್ಗಳ ಜಾಲಕ್ಕೆ ವಿದ್ಯುತ್ ಪೂರೈಕೆ ಮಾಡಲಿದೆ.
ರಾಜ್ಯ ಪ್ರತಿ ಉಪ ವಿದ್ಯುತ್ ಕೇಂದ್ರಗಳ ಬಳಿ ಕುಸುಮ್ – ಸಿ ಯೋಜನೆಯಡಿ ಸೌರ ಫಲಕಗಳನ್ನು ಸ್ಥಾಪಿಸಿ ಆ ಮೂಲಕ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡುವುದು ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಎಲ್ಲಜಿಲ್ಲೆಗಳಲ್ಲೂಘಟಕಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಆದರೆ ಜಾಗ ಹುಡುಕುವುದೇ ದೊಡ್ಡ ಸಮಸ್ಯೆಯಾಗಿದೆ.
ಜಲವಿದ್ಯುತ್ ಸ್ಥಾವರಗಳಿಂದ ಬೇಸಿಗೆ ಸಮಯದಲ್ಲಿನಿರೀಕ್ಷಿತ ವಿದ್ಯುತ್ ಉತ್ಪಾದನೆ ಮಾಡುವುದು ಅಸಾಧ್ಯ. ಹೀಗಾಗಿ ಈಗಿರುವ ವಿದ್ಯುತ್ ಉಪ ಕೇಂದ್ರಗಳನ್ನೇ ಸೌರವಿದ್ಯುತ್ ಸ್ವಾವಲಂಬನೆ ಮಾಡುವ ಸಲುವಾಗಿ ಕುಸುಮ್-ಸಿ ಯೋಜನೆಯಡಿ ಕೇಂದ್ರಗಳ ಬಳಿಯೇ ಸೌರವಿದ್ಯುತ್ ಉತ್ಪಾದನಾ ಘಟಕಗಳನ್ನು ಮಾಡಿ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ ಗ್ರಿಡ್-ಸಂಪರ್ಕಿತ ಕೃಷಿ ಪಂಪ್ಗಳಿಗೆ ವಿದ್ಯುತ್ ಪೂರೈಸಲು ಸಾಧ್ಯವಾಗಲಿದೆ.