ನಾನವನಲ್ಲ…ನಾನವನಲ್ಲ….ನಾನವನಲ್ಲ….ಪಹಲ್ಗಾಮ್ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ…. ಹೀಗಂತಾ ಏಕಾಏಕಿ ವಿಡಿಯೋ ಹೇಳಿಕೆ ರಿಲೀಸ್ ಮಾಡಿ ಗೋಗರೆಯುತ್ತಿರುವುದು ಬೇರಾರೂ ಅಲ್ಲ ಅದು ಅತ್ಯುಗ್ರ, ಲಷ್ಕರ್ ಸಂಘಟನೆಯ ಕಮಾಂಡರ್ ಸೈಫುಲ್ಲಾ. ದಾಳಿ ನಡೆದ ಎರಡೇ ದಿನಕ್ಕೆ ಪತರಗುಟ್ಟಿ ಹೋಗಿರುವ ಸೈಪುಲ್ಲಾ ಇನ್ನು ತನಗೆ ಉಳಿಗಾಲವಿಲ್ಲ ಅನ್ನೋದನ್ನು ಮನದಟ್ಟು ಮಾಡಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಸೈಪುಲ್ಲಾಗೆ ಕಾಡ್ತಿರೋ ಸಾವಿನ ಭೀತಿ ಇಂಥದ್ದೊಂದು ಹೇಳಿಕೆಯನ್ನು ರಿಲೀಸ್ ಮಾಡುವಂತೆ ಮಾಡಿದೆ.
ಮೋದಿಯ ಒಂದೇ ಒಂದು ಹೇಳಿಕೆಯಿಂದ ಸೀನ್ ಚೇಂಜ್
ಪಹಲ್ಗಾಮ್ ದಾಳಿಯಾಗಿ 48 ಗಂಟೆ ಕಳೆಯುವುದರೊಳಗಾಗಿ ಉಗ್ರ ಸಂಘಟನೆಯೊಂದು ಹೀಗೆ ವಿಡಿಯೋ ರಿಲೀಸ್ ಮಾಡಿದ ಇತಿಹಾಸವೇ ಇಲ್ಲ. ಜಗತ್ತಿಗೇ ಗೊತ್ತಿರುವ ಬಹಿರಂಗ ಸತ್ಯ ಎನ್ನುವಂತೆ ಸೈಫುಲ್ಲಾ ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್. ಆದ್ರೆ ಹೀಗೆ ದಿಢೀರ್ ವಿಡಿಯೋ ಸಬೂಬು ನೀಡಿದ್ದು ಯಾಕೆ ಅನ್ನೋದು ಈಗಿರುವ ದೊಡ್ಡ ಪ್ರಶ್ನೆ. ಅಷ್ಟೇ ಅಲ್ಲಾ ಭಾರತ ವಿನಾಕಾರಣ ನನ್ನನ್ನ ಟಾರ್ಗೆಟ್ ಮಾಡ್ತಿದೆ. ಕಾಶ್ಮೀರ ಕಣಿವೆಗೆ 10 ಲಕ್ಷ ಯೋಧರನ್ನು ರವಾನಿಸಿದೆ. ಈ ಮೂಲಕ ಪಾಕಿಸ್ಥಾನಿಗಳ ನೆಮ್ಮದಿಯನ್ನು ಕದಡುವ ಕಾರ್ಯವನ್ನ ಭಾರತ ಮಾಡುತ್ತಿದೆ ಅಂತಲೂ ಗೊಣಗಿರುವ ಸೈಫುಲ್ಲಾಗೀಗ ನಿಂತಲ್ಲೆಲ್ಲಾ ನೆಲವೇ ಕುಸಿಯುತ್ತಿದೆ ಎನ್ನುವಂತಾಗಿದೆ.
ಪಾಪರ್ ಪಾಕಿಸ್ಥಾನ ಪತರಗುಟ್ಟಿಬಿಡ್ತಾ
ದಾಳಿ ಬೆನ್ನಲ್ಲೇ, ಭಾರತ ತನ್ನ ಮೇಲೆ ದಾಳಿಗೆ ಸಂಚು ರೂಪಿಸ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತಿವಿ. ಹೆದರುವ ಪ್ರಶ್ನೆಯೇ ಇಲ್ಲಾ ಅಂತಾ ಹೂಂಖರಿಸಿದ್ದ ಪಾಕಿಸ್ಥಾನ ಈಗ ನಡಗುತ್ತಿದೆಯಾ. ಅದ್ರಲ್ಲೂ ಸೈಫುಲ್ಲಾನ ಹೇಳಿಕೆ ಬೆನ್ನಲ್ಲೇ ಪಾಕ್ ಬೀಸೋ ದೊಣ್ಣೆಯಿಂದ ಪಾರಾಗೋ ಕಸರಸ್ತು ಮಾಡ್ತಿದೆಯಾ ಅನ್ನಿಸುತ್ತಿದೆ. ಆರ್ಥಿಕವಾಗಿ ಕಂಗಾಲಾಗಿ ಚೀನಾದ ಮುಂದೆ ಭಿಕ್ಷೆಗೆ ನಿಂತಿರೋ ಪಾಕ್ ಒಂದೊಮ್ಮೆ ಭಾರತದ ಕೆಂಗಣ್ಣಿಗೆ ಗುರಿಯಾದ್ರೆ ಮತ್ತೆಂದೂ ಮೇಲೇಳಲಾಗದಂಥಾ ಪರಿಸ್ಥಿತಿಗೆ ಸಿಲುಕುತ್ತೆ. ಈ ನಡುಕ ಶುರುವಾಗ್ತಿದ್ದಂತೆ ಮಾಡೋದೆಲ್ಲಾ ಮಾಡಿ ಈಗ ನಾನವನಲ್ಲ ಅನ್ನೋ ಹೇಳಿಕೆ ರಿಲೀಸ್ ಮಾಡಿಸಿದೆ.
ಬಿಹಾರದಲ್ಲಿ ನಿನ್ನೆ ಘರ್ಜಿಸಿದ್ದ ಪ್ರಧಾನಿ ಮೋದಿ ಮುಟ್ಟಿ ನೋಡಿಕೊಳ್ಳುವಂತೆ ಕೊಡ್ತೀವಿ ಅಂದಿದ್ರು. ಅಷ್ಟೇ, ಇತ್ತ ಸೇನೆ ಕಾಶ್ಮೀರದ ಗಲ್ಲಿ ಗಲ್ಲಿ ಹೊಕ್ಕು ಅಡಗಿ ಕುಳಿತಿದ್ದ ಜಿಹಾದಿ ರಕ್ಕಸರನ್ನು ಬೇಟೆಯಾಡ್ತಿದೆ. ಇನ್ನೇನು ಪಿಒಕೆಗೆ ನುಗ್ಗಿ ಸೈಫುಲ್ಲಾ ಮತ್ತು ಬಂಟರ ಎದೆ ಬಗೆಯೋದೊಂದೇ ಬಾಕಿ. ಈ ನಡುವೆಯೇ ಇಂಥದ್ದೊಂದು ಹೇಳಿಕೆ ನಿಜಕ್ಕೂ ಕಳ್ಳನ ಮನಸ್ಸಿನ ಪ್ರತಿಬಿಂಬವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅಲ್ಲಿಗೆ ಸೈಫುಲ್ಲಾನ ಅಂತಿಮ ದಿನಗಳು ಈ ವಿಡಿಯೋ ಮೂಲಕವೇ ಆರಂಭವಾಗಿದ್ದು, ಪಾಕ್ ಗೆ ಚಳಿಜ್ವರ ಶುರುವಾಗಿರೋದು ಸಾಬೀತಾಗಿದೆ.