ಮಂಡ್ಯ: ಕೆ.ಆರ್.ಎಸ್ ಡ್ಯಾಂ ಭದ್ರತೆಗೆ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದ್ದರೂ ಅಭದ್ರತೆ ಎದ್ದು ಕಾಣುತ್ತಿದೆ.
ಇದೀಗ ಯುವಕರ ತಂಡವೊಂದು ಕೆ.ಆರ್.ಎಸ್ ಡ್ಯಾಂಗೆ ಒಳ ನುಸುಳಿ ಕ್ರೆಸ್ಟ್ ಗೇಟ್ ಕೆಳಗಿನ ಪ್ರದೇಶದಲ್ಲಿ ಓಡಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಲೈವ್ ವಿಡಿಯೋ ಮಾಡಿ ಕೆ.ಆರ್.ಎಸ್ ಡ್ಯಾಮನ್ನು ವರ್ಣಿಸಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಯುವಕರ ಪುಂಡಾಟಕ್ಕೆ ಬ್ರೇಕ್ ಹಾಕಲು ಭದ್ರತಾ ಪಡೆ ವಿಫಲವಾಯಿತಾ ಎಂದು ಪ್ರಶ್ನಿಸಿದ್ದಾರೆ.