ಕೊಡಗು : ದುಷ್ಕರ್ಮಿಗಳು ತೋಟದಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಬಳಿಯ ಶ್ರೀಮಂಗಲದಲ್ಲಿ ಈ ಘಟನೆ ನಡೆದಿದ್ದು, ಕೆಚ್ಚಟ್ಟೀರ ಅಪ್ಪಯ್ಯ ಎಂಬುವವರ ಜಮೀನಿನಲ್ಲಿ ದುಷ್ಕರ್ಮಿಗಳು ಬೇಲಿಯ ಮೇಲೆ ಉರುಳು ಹಾಕಿದ್ದರು. ಈ ಉರುಳಿಗೆ ಸಿಲುಕಿ ಹುಲಿ ಪ್ರಾಣ ತೆತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ’45’ ಟ್ರೈಲರ್ ಧಮಾಕಾ.. ಭರತನಾಟ್ಯ ಆಡ್ತಾರೆ ‘ದೊಡ್ಮನೆ ಕಿಂಗ್’



















