ದಾವಣಗೆರೆ: ಲಕ್ಕಿ ಬಾಸ್ಕರ್ ಸಿನಿಮಾ ಮಾದರಿಯಲ್ಲಿ ಬ್ಯಾಂಕ್ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ಗೆ ವಂಚಿಸಿರುವ ಘಟನೆ ದಾವಣಗೆರೆ ನಗರದ ಲಾಯರ್ ರೋಡ್ ನಲ್ಲಿರುವ ಸಿಎಸ್ ಬಿ ಬ್ಯಾಂಕ್ ನಲ್ಲಿ ನಡೆದಿದೆ.

ಸಂಜಯ್ ಎಂಬ ವಂಚಿಸಿದ ಸಿಬ್ಬಂದಿ ಎನ್ನಲಾಗಿದೆ. ಸಂಜಯ್ ಬ್ಯಾಂಕ್ ನಲ್ಲಿ ಅಡವಿಟ್ಟ ಚಿನ್ನದ ಮೇಲ್ವಿಚಾರಣೆ ನೋಡಿಕೊಳ್ಳುತಿದ್ದ. ಈಗ ಬ್ಯಾಂಕ್ನಲ್ಲಿ ಅಡಮಾನ ಇಟ್ಟ 3 ಕೆಜಿ ಅಸಲಿ ಚಿನ್ನ ಕದ್ದು ನಕಲಿ ಚಿನ್ನವಿಟ್ಟು ವಂಚನೆ ಮಾಡಿದ್ದಾನೆ. ಈ ಅಸಲಿ ಚಿನ್ನವನ್ನು ಬೇರೆ ಬ್ಯಾಂಕ್ ನಲ್ಲಿ ಅಡವಿಟ್ಟು ಸಾಲ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.
CSB ಬ್ಯಾಂಕ್ ನ ಮುಖ್ಯ ಸಿಬ್ಬಂದಿ ಲೆಕ್ಕ ಪರಿಶೀಲನೆಗೆ ಬಂದಾಗ ಲಾಕರ್ ಕೀ ನೀಡದೆ ಬ್ಯಾಂಕ್ ನಿಂದ ಸಂಜಯ್ ಓಡಿ ಹೋಗಿದ್ದಾನೆ. ಅನುಮಾನ ಬಂದ ಮುಖ್ಯ ಸಿಬ್ಬಂದಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈತ CSB ಬ್ಯಾಂಕ್ ಗೆ ಬರೋಬ್ಬರಿ 1.86 ಕೋಟಿ ಚಿನ್ನ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ದಾವಣಗೆರೆ KTJ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.