ಬೆಂಗಳೂರು: 5 ವರ್ಷಗಳ ನಂತರ ಕೆಂಪೇಗೌಡ ಜಯಂತಿಗೆ ಬಿಬಿಎಂಪಿ ಮುಂದಾಗಿದ್ದು, ಈ ಬಾರಿ ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಅವರ 516ನೇ ಜಯಂತಿ ನಡೆಯಲಿದೆ. ಪಾಲಿಕೆ ಕೇಂದ್ರ ಕಚೇರಿಯ ಡಾ. ರಾಜಕುಮಾರ ಗಾಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಳೆದ ವರ್ಷ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ಮಾಡಿ ಸಾಧಕರ ಅಯ್ಕೆ ಮಾಡಲಾಗಿತ್ತು.
ಸುಮಾರು 800 ಸಾಧಕರ ಪೈಕಿ 163 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ, ಅದೇ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿ ಅಂತಿಮ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇನ್ನೂ ಕೆಂಪೇಗೌಡರ ಜಯಂತಿ ಹೆಸರಲ್ಲಿ ಪಾಲಿಕೆಯಿಂದ ದುಂದು ವೆಚ್ಚ ಮಾಡಲಾಗುತ್ತಿದೆ.
ರಾಜ್ಯದ ಪ್ರತಿ ತಾಲೂಕಿಗೂ ಒಂದು ಲಕ್ಷ ಅನುದಾನ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಯ ತೆರಿಗೆ ಹಣ ಬೇರೆ ಜಿಲ್ಲೆಗಳಿಗೆ ಯಾಕೆ ಖರ್ಚು ಮಾಡಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ಇಡೀ ತಾಲ್ಲೂಕಿಗೆ ಪಾಲಿಕೆಯ ಅಸ್ತಿ ತೆರಿಗೆ ಹಣ ವ್ಯಯ ಮಾಡುತ್ತಿರುವುದು ನೋವಿನ ಸಂಗತಿ. ಈ ರೀತಿ ಮಾಡುತ್ತಿರುವುದು ತೆರಿಗೆದಾರರ ಹಣ ದುಂದು ವೆಚ್ಚ ಮಾಡಿದಂತಾಗುತ್ತಿದೆ. ಇದನ್ನೇ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಬಳಕೆ ಮಾಡಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.