ಬೆಂಗಳೂರು: ಇಲ್ಲಿನ ರಾಯಲ್ ಸ್ಪಾಗೆ ನುಗ್ಗಿ ಗೂಂಡಾಗಿರಿ ಮಾಡಿದ್ದ ಕಾವ್ಯಾಳ ಕರಾಳ ಚರಿತ್ರೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಅಮೃತಹಳ್ಳಿಯಲ್ಲಿನ ಸ್ಪಾಗೆ ನುಗ್ಗಿ ದಾಂಧಲೆ ಮಾಡಿದ್ದ ಕಾವ್ಯಾ ಹಿಂದೆ ಕುಖ್ಯಾತ ರೌಡಿ ಮುನಿಕೃಷ್ಣ ಅಲಿಯಾಸ್ ಕಪ್ಪೆಯ ನೆರಳಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಅಮೃತಹಳ್ಳಿಯಲ್ಲಿ ಗೂಂಡಾಗಿರಿ ಮಾಡಿಕೊಂಡು ಓಡಾಡುತ್ತಿದ್ದ ಕಪ್ಪೆಯನ್ನು ಈ ಹಿಂದೆ ಬೆಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಿದ್ದರು.
ಸದ್ಯ ಕಲಬುರಗಿ ಜೈಲಿನಲ್ಲಿ ಕಪ್ಪೆ ಕಂಬಿ ಎಣೆಸುತ್ತಿದ್ದಾನೆ. ಇದೇ ಕಪ್ಪೆಯ ಮನದನ್ನೆಯಾಗಿರುವ ಕಾವ್ಯ, ಅವನ ಹೆಸರೇಳಿಕೊಂಡೇ ಏರಿಯಾದಲ್ಲಿ ಹವಾ ಮೆಂಟೇನ್ ಮಾಡಿದ್ದಳು. ಕಪ್ಪೆಯ ನಾಮಬಲದಿಂದಲೇ ರಾಯಲ್ ಸ್ಪಾಗೆ ನುಗ್ಗಿ ತನ್ನ ದರ್ಪ ಮೆರೆದ್ದಲ್ಲದೆ, ವ್ಯಕ್ತಿಯನ್ನು ಅಪಹಿರಿಸಿ ಕಾರಿನಲ್ಲಿ ಹಿಂಸಿಸಿದ ಆರೋಪ ಎದಿರುಸುತ್ತಿದ್ದಾಳೆ. ಈ ಪ್ರಕರಣದಲ್ಲೇ ಕಾವ್ಯ ಈಗ ಖಾಕಿ ಆತಿಥ್ಯ ಸ್ವೀಕರಿಸುತ್ತಿದ್ದಾಳೆ. ಈ ಹಿಂದೆ ಕಾವ್ಯ ಸ್ಪಾವೊಂದರಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕಪ್ಪೆ ಕಣ್ಣಿಗೆ ಬಿದ್ದು ಇಬ್ಬರ ನಡುವೆ ಪ್ರೀತಿಯಾಗಿತ್ತು ಎನ್ನಲಾಗುತ್ತಿದೆ.