ಬೆಂಗಳೂರು: ಬ್ಯಾಂಕಾಕ್ ನಲ್ಲಿ ಪ್ರಭಲ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಈ ವೇಳೆ ಅಲ್ಲಿ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಇಂದು ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಬ್ಯಾಂಕಾಕ್ ನಿಂದ ಬೆಂಗಳೂರು ಏರ್ ಪೋರ್ಟ್ ಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಹಲವರು ಪತ್ನಿ-ಮಕ್ಕಳೊಂದಿಗೆ ಟ್ರಿಪ್ ಗೆ ಹೋದವರು ಈಗ ಭೂಕಂಪನದಿಂದಾಗಿ ಮರಳಿ ಬಂದಿದ್ದಾರೆ.
ಮೂರು ನಾಲ್ಕು ದಿನಗಳ ಟ್ರಿಪ್ ಗೆ ಹೋಗಿದ್ದವರು ಕೂಡ ಭೂಕಂಪನದಿಂದಾಗಿ ನಿಗದಿತ ಸಮಯಕ್ಕೂ ಮೊದಲೇ ಮರಳಿದ್ದಾರೆ. ಏರ್ ಪೋರ್ಟ್ ಗೆ ಬಂದು ಏರ್ಪೋಟ್ ನಿಂದ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ.