ಶಿವಮೊಗ್ಗ: ನಟ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ವಿಚಾರವಾಗಿ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಓರ್ವ ನಟ ಅನ್ನೋದಕ್ಕಿಂತ ಓರ್ವ ರಾಜಕಾರಣಿ. ಆ ಮನುಷ್ಯನಿಗೆ ತಮಿಳು ವೋಟ್ ಬೇಕು. ಅದಕ್ಕಾಗಿಯೇ ಆತ ಹಾಗೇ ಮಾತನಾಡಿದ್ದಾನೆ. ವೋಟ್ ಗಾಗಿ ಆತ ತನ್ನ ಭಾಷೆಯ ಬಗ್ಗೆ ಪ್ರೀತಿ ವ್ಯಕ್ತಪಡಿಸಬಹುದು. ಆದರೆ, ಇನ್ನೊಂದು ಭಾಷೆಯ ಬಗ್ಗೆ ಅಲ್ಲಗಳೆದು ಮಾತನಾಡಬಾರದು. ಆ ಅಧಿಕಾರ ಆತನಿಗಿಲ್ಲ. ಹೀಗಾಗಿ ಆತ ಕನ್ನಡಿಗರ ಕ್ಷಮೆ ಕೇಳಬೇಕು. ಒಬ್ಬ ನಟನಾಗಿ ಆತನನ್ನು ಗೌರವಿಸುತ್ತೇನೆ. ಆದರೆ, ಈ ರೀತಿ ಹುಚ್ಚುಚ್ಚಾಗಿ ಮಾತನಾಡಿದರೆ, ಆತನನ್ನು ನಟನಾಗಿ ಗೌರವಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.