ಕಾರವಾರ: ಮಳೆಯ ಮಧ್ಯೆಯೂ ಕದಂಬೋತ್ಸವ ನಡೆದಿದೆ.
ಶಿರಸಿಯ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವಕ್ಕೆ ಮಳೆರಾಯ ಅಡ್ಡಿಪಡಿಸಿದರೂ ಕದಂಬೋತ್ಸವ ಅದ್ದೂರಿಯಾಗಿ ಜರುಗಿತು. ಕದಂಬೋತ್ಸವ ಕಾರ್ಯಕ್ರಮ ಉದ್ಘಾಟನೆಯಾಗುತ್ತಿದ್ದಂತೆ ಜೋರಾಗಿ ಮಳೆ ಬೀಸಿದೆ. ಮಳೆಯ ಮಧ್ಯೆಯೂ ಕಾರ್ಯಕ್ರಮ ನಡೆಸಲಾಯಿತು.
ಆದರೆ, ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದವರು ಪರದಾಟ ನಡೆಸುವಂತಾಯಿತು. ವಾಟರ್ ಪ್ರೂಪ್ ಶಾಮಿಯಾನ ಹಾಕಿದ್ದರಿಂದಾಗಿ ಜನರಿಗೆ ಅಷ್ಟೊಂದು ಸಮಸ್ಯೆಗಳಾಗಲಿಲ್ಲ. ಆದರೆ, ವ್ಯಾಪಾರಸ್ಥರಿಗೆ ಮಾತ್ರ ತೊಂದರೆಯಾಯಿತು.