ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಮಿಟಿ ವರದಿ ಬಿಡುಗಡೆಯಾಗಿದೆ.
ಶೇ. 90ರಷ್ಟು ಪರಿಶಿಷ್ಟ ಜಾತಿ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆ ಮಾಡಿರುವ ಕಮಿಟಿಯ ಹೇಳಿಕೆಯಂತೆ ರಾಜ್ಯದಲ್ಲಿ 1,16,67,040 ಜನ ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಈ ಪೈಕಿ 1,05,00,424 ಪರಿಶಿಷ್ಟ ಜನರ ಸಮೀಕ್ಷೆ ಮಾಡಲಾಗಿದೆ. ಶಾಲೆಗಳು ಆರಂಭ ಆಗಿರೋ ಹಿನ್ನೆಲೆಯಲ್ಲಿ ಈಗ ಆನ್ ಲೈನ್ ಸಮೀಕ್ಷೆ ಆರಂಭಿಸಲಾಗಿದೆ. ಇದೇ ಜೂನ್ 22ರ ವರೆಗೂ ಸಮೀಕ್ಷೆಗೆ ಅವಕಾಶ ನೀಡಲಾಗಿದೆ. ಸಮೀಕ್ಷೆಯಲ್ಲಿ ನೋಂದಣಿ ಆಗದವರು ಆನ್ ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಬಹುದು.