ಶಿವಮೊಗ್ಗ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತಾಗಿದ್ದ ಹೋಂ ಗಾರ್ಡ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದು ಹೋಂ ಗಾರ್ಡ್ ಕಮಾಂಡೆಂಟ್ ನಿಂದ ಕಣ್ಣೊರೆಸುವ ತಂತ್ರ ಎಂದು ಸಾರ್ವಜನಿಕರು ಆಕ್ರೋಶ ಪಡುವಂತಾಗಿದೆ. ಅಮಾನತಾಗಿದ್ದ ಡಿ.ರಾಘು ಹಾರ್ನಹಳ್ಳಿಯಲ್ಲಿ ನಡೆದ ಪರೇಡ್ ಗೆ ಹಾಜರಾಗಿದ್ದಾರೆ. ಪರೇಡ್ ಗೆ ಹಾಜರಾದವರ ಪಟ್ಟಿಯಲ್ಲಿದೆ ರಾಘು ಹೆಸರು ಕೂಡ ಇದೆ.
ಜನಿವಾರದ ಪ್ರಕರಣ ನಡೆಯುತ್ತಿದ್ದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಮಾನತು ಮಾಡಿದ್ದರು. ಹೀಗಾಗಿ ಹೋಂ ಗಾರ್ಡ್ ಕಮಾಂಡೆಂಟ್ ಡಾ. ಚೇತನ್ ಇಬ್ಬರನ್ನು ಅಮಾನತು ಮಾಡಿದ್ದರು. ಕಲಾವತಿ ಹಾಗೂ ರಾಘು ಅಮಾನತುಗೊಂಡಿದ್ದರು.
ಏಪ್ರಿಲ್ 18ರಂದು ಅವರಿಬ್ಬರನ್ನು ಅಮಾನತು ಮಾಡಲಾಗಿತ್ತು. ಆದರೆ, ಈಗ ರಾಘು ಪರೇಡ್ ವೇಳೆ ಹಾಜರಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.