ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳನ್ನು ಕಂಡು ಇತರೆ ಕೆಲ ಸ್ಪರ್ಧಿಗಳಿಗೆ ಸಹಿಸಲಾಗುತ್ತಿಲ್ಲ. ಮೊನ್ನೆ ವಾರದಲ್ಲಿ ಜಾನ್ವಿ, ಅಶ್ವಿನಿ ಜೊತೆ ನಿನ್ನೆ ಮೊನ್ನೆ ಬಂದವರೆಲ್ಲ ಕ್ಯಾಪ್ಟನ್ ಆದ್ರು ಅಂತ ರಘು ಬಗ್ಗೆ ಮಾತನಾಡಿದ್ದರು. ಅಲ್ಲದೆ ವೈಲ್ಡ್ ಕಾರ್ಡ್ ಸ್ಪರ್ಧಿ ರಿಷಾ ಅವರು ಗಿಲ್ಲಿ ನಟ ಹಾಗೂ ಚಂದ್ರಪ್ರಭ ಜೊತೆ ತುಂಬಾ ಆತ್ಮೀಯತೆಯಿಂದ ಇದ್ದಾರೆ. ಇದನ್ನೆಲ್ಲ ಜಾನ್ವಿ-ಅಶ್ವಿನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಿರುವಾಗ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಜಾನ್ವಿ ಕೊಟ್ಟ ಸ್ಟೇಟ್ಮೆಂಟ್ಗೆ ಸುದೀಪ್ ಮುಂದೆಯೇ ಜಗಳವಾಗಿದೆ.
ಕಿಚ್ಚ ಸುದೀಪ್ ಅವರು, ನಿಮ್ಮ ದೃಷ್ಟಿಕೋನದಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೇಲೆ ಅಭಿಪ್ರಾಯ ತಿಳಿಸಿ ಎಂದು ಇತರೆ ಸ್ಪರ್ಧಿಗಳನ್ನ ಕೇಳಿದ್ದಾರೆ. ಇದಕ್ಕೆ ಅಶ್ವಿನಿ, ರಿಷಾ ಬಗ್ಗೆ ನನ್ಗೆ ತುಂಬಾ ಪಾಸಿಟಿವ್ ಅಂತ ಅನಿಸಲಿಲ್ಲ ಎಂದಿದ್ದಾರೆ. ಬಳಿಕ ಜಾನ್ವಿ, ರಿಷಾ ಅವರು ಚಂದ್ರಪ್ರಭ ಜೊತೆಗೆ ಇರಬಹುದು ಅಥವಾ ಗಿಲ್ಲಿ ಜೊತೆಗೆ ಇರಬಹುದು ಅವರು ಫನ್ ಆಗೇ ಕಾಣಿಸುತ್ತಾರೆ. ಆದ್ರೆ ನಮ್ಗೆ ಅದು ಎಲ್ಲೊ ಒಂದುಕಡೆ ಸಣ್ಣದಾಗಿ ಮುಜುಗರ ಆಗುತ್ತೆ ಎಂಬ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಜಾನ್ವಿ ನೀಡಿದ ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ ಮಗನ್ದು ತಾಕತ್ ಏನು ಅಂತ ತೋರಿಸ್ತೇನೆ ಎಂದು ರಿಷಾ ಹೇಳಿದ್ದಾರೆ. ಇಷ್ಟೆಲ್ಲ ಜಗಳ ನಡೆಯುತ್ತಿರುವಾಗ ಅತ್ತ ಕಿಚ್ಚ ಸುದೀಪ್ ಇದನ್ನೆಲ್ಲ ಗಮನಿಸಿದ್ದಾರೆ. ಈ ಘಟನೆಗೆ ಕಿಚ್ಚ ಏನು ಹೇಳುತ್ತಾರೆ ಎನ್ನುವುದು ನೋಡಾಬೇಕಾಗಿದೆ.


















