ಚಂದನವನದಲ್ಲಿ ಇತ್ತೀಚೆಗೆ ಹಲವಾರು ಉತ್ತಮ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಈಗ ಜಲಂಧರ ಸಿನಿಮಾ ಬಂದು ನಿಂತಿದ್ದು, ಜಲಂಧರ ಚಿತ್ರದ ಸಾವಿನ ಬಗೆಗಿನ ಹಾಡು ಅಭಿಮಾನಿಗಳ ಮನ ತಟ್ಟಿದೆ.
ಈ ಚಿತ್ರವು ಚಿತ್ರ ಹೆಸರು ಹಾಗೂ ಪಾತ್ರ ವರ್ಗದಿಂದಾಗಿ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈಗ ‘ಜಲಂಧರ’ ಸಿನಿಮಾದ ಹಾಡುಗಳ ಬಗ್ಗೆ ಜನರಲ್ಲಿ ಸಂತಸ ಮನೆ ಮಾಡಿದೆ. ಹುಟ್ಟುತ್ತ ನಾವು ಕಟಗೊಂಡು ಬಂದೇವು, ದೇಹದೊಳಗೆ ಸಾವು ನಮ್ಮೊಳಗೆ ಎಂಬ ಹಾಡು ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ಹೆಚ್ಚು ಸೆಳೆಯುತ್ತಿದೆ.
ಈ ಸಿನಿಮಾದ ಆಡಿಯೋ ಹಕ್ಕಗಳನ್ನು ‘ಜಂಕಾರ್ ಆಡಿಯೋ’ ಸಂಸ್ಥೆ ಈಗಾಗಲೇ ಪಡೆದುಕೊಂಡಿದೆ. ಹೀಗಾಗಿ ‘ಜಲಂಧರ’ ಚಿತ್ರದ ಸಾಂಗ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಲಾಫಿಂಗ್ ಬುದ್ಧ’ ಸಿನಿಮಾದ ಮೂಲಕ ನಟ ಪ್ರಮೋದ್ ಶೆಟ್ಟಿ ಅವರು ಹೀರೋ ಆಗಿ ಗಮನ ಸೆಳೆದಿದ್ದರು. ಹೀಗಾಗಿ ಅವರ ನಟನೆಯ ಜಲಂಧರ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
‘ಜಲಂಧರ’ ಸಿನಿಮಾನ್ನು ‘ಸ್ಟೆಪ್ ಅಪ್ ಪಿಕ್ಚರ್ಸ್’ ಮೂಲಕ ಮದನ್ ಎಸ್. ಅವರು ನಿರ್ಮಾಣ ಮಾಡುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ.ಎಲ್. ರಮೇಶ್ ರಾಮಚಂದ್ರ ಮತ್ತು ಪದ್ಮನಾಭನ್ ಮಂಗುದೊಡ್ಡಿ ಅವರು ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ವಿಷ್ಣು ವಿ. ಪ್ರಸನ್ನ ಅವರು ‘ಜಲಂಧರ’ ಚಿತ್ರಕ್ಕೆ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಶ್ಯಾಮ್ ಸುಂದರ್ ಹಾಗೂ ಅಕ್ಷಯ್ ಕುಮಾರ್ ಅವರು ಚಿತ್ರಕಥೆ ಬರವಣಿಗೆಯಲ್ಲಿ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಹಾಗೂ ವಿದ್ಯಾ ಶಂಕರ್ ಪಿ.ಎಸ್. ಛಾಯಾಗ್ರಹಣ ಮಾಡಿದ್ದಾರೆ. ಜಿ. ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗು ಯುಡಿವಿ ವೆಂಕಿ ಸಂಕಲನ ಚಿತ್ರಕ್ಕಿದೆ.
ಪ್ರಮೋದ್ ಶೆಟ್ಟಿ ಅವರ ಜೊತೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ಸ್ಟೆಪ್ ಅಫ್ ಲೋಕಿ ಕೂಡ ನಟಿಸಿದ್ದಾರೆ. ಈ ಸಿನಿಮಾಗೆ ಕಥೆ ಬರೆದಿದ್ದು ಕೂಡ ಲೋಕಿ. ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದ ಕಾನ್ಸ್ಟೇಬಲ್ ಸರೋಜಾ ಎಂಬ ಪಾತ್ರದಲ್ಲಿ ಫೇಮಸ್ ಆಗಿದ್ದ ನಟಿ ಋಷಿಕಾ ರಾಜ್ ಈ ಚಿತ್ರದಲ್ಲಿದ್ದಾರೆ. ಬಲರಾಜ್ ವಾಡಿ, ಆರೋಹಿತಾ ಗೌಡ, ರಘು ರಾಮನಕೊಪ್ಪ, ಪ್ರತಾಪ್ ನನಸು, ನವೀನ್ ಸಾಗರ್, ಆದಿ ಕೇಶವರೆಡ್ಡಿ, ವಿಜಯರಾಜ್, ಭೀಷ್ಮಾ ರಾಮಯ್ಯ, ಪ್ರಸಾದ್, ಅಂಬು ಸೇರಿದಂತೆ ಹಲವರು ನಟಿಸಿದ್ದಾರೆ.