ಚಿತ್ರದುರ್ಗ: ಜನ ಇಷ್ಟು ದಿನ ನನ್ನನ್ನು ಶಾಸಕರಾಗಿ ನೋಡಿದ್ದಾಯ್ತು ಇನ್ಮುಂದೆ ಮಂತ್ರಿ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರೆ ಎಂದು ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿಯಲ್ಲಿ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ನಾನು ಸೀನಿಯರ್ ಆಗಿ 7 ಬಾರಿ ಗೆದ್ದಿದ್ದೇನೆ. ನನ್ನನ್ನು ದುಡಿಸಿಕೊಂಡಿದ್ದಾರೆ. ಈ ಹಿಂದೆ 2 ಸಾರಿ ಗೆದ್ದರೆ ಸೀನಿಯರಿಟಿ, 3 ಸಾರಿ ಗೆದ್ದರೆ ಮಂತ್ರಿ ಮಾಡಲೇಬೇಕಿತ್ತು. ಆದರೆ, ಆ ಪದ್ದತಿಗಳೆಲ್ಲ ಈಗ ವ್ಯಾನೀಶ್ ಆಗಿ ಹೋಗುತ್ತೇವೆ. 7 ಸಾರಿ ಗೆದ್ದಿದ್ದೇನೆ. ನನಗೂ ಕೂಡ ಎಲಿಜಬಿಲಿಟಿ ಇದೆ. ನನಗಿಂತ ಹಿಂದೆ ಬಂದವರು ಎರಡ್ಮೂರು ಬಾರಿ ಮಂತ್ರಿಯಾಗಿದ್ದಾರೆ. ಆದ್ದರಿಂದ ವರಿಷ್ಟರು ತೀರ್ಮಾನಿಸಿ ಮಂತ್ರಿ ಸ್ಥಾನ ಕೊಟ್ಟರೆ ಹೆಚ್ಚಿನ ಕೆಲಸವನ್ನು ಮಾಡಬಹುದು. ಕೊಡದಿದ್ದರೆ ತೊಂದರೆಯಾಗುತ್ತದೆ ಎಂದು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.