ಹುಬ್ಬಳ್ಳಿಯಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿದ್ದಾರೆ.
ಅತ್ಯಾಚಾರಕ್ಕೆ ಗುರಿಯಾದ ಬಾಲಕಿಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿಯ ಮೈಮೇಲೆ ಗಾಯಗಳಾಗಿರುವುದು ದೃಢಪಟ್ಟಿದೆ. ಬಾಲಕಿಯ ಮರಣೋತ್ತರ ಪರೀಕ್ಷೆ ಬರುತ್ತೆ. ಎಫ್ ಎಸ್ಎಲ್ ಗೆ ಸ್ಯಾಂಪಲ್ ಕಳುಹಿಸಲಾಗುತ್ತಿದೆ. ಬಾಲಕಿಯ ಮೇಲೆ ದೌರ್ಜನ್ಯ ನಡೆದಿರುವುದು ವರದಿ ಬಂದ ನಂತರ ಗೊತ್ತಾಗುತ್ತದೆ. ಬೇರೆ ಬೇರೆ ರಾಜ್ಯದ ಜನರು ಕರ್ನಾಟಕದಲ್ಲಿದ್ದಾರೆ. ಬಿಹಾರಿಗಳು ಇಲ್ಲಿಗೆ ಬಂದು ಮಾದಕ ಅಡ್ಡಾ ಮಾಡಿಕೊಂಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಈ ಕುರಿತು ಪೊಲೀಸ್ ಆಯುಕ್ತರಿಂದಲೂ ಮಾಹಿತಿ ಪಡೆದಿದ್ದಾನೆ
ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸುತ್ತೇನೆ. ಫಾಸ್ಟ್ ಟ್ರ್ಯಾಕ್ ನಲ್ಲಿ ಮುಗಿಸಿ ಶಿಕ್ಷೆ ಕೊಡಿಸುವಂತಾಗಬೇಕು. ಆದರೆ ಈ ರೀತಿ ಆಗುತ್ತಿಲ್ಲ. ನೇಹಾ ಕೊಲೆ ಆದಾಗಲೂ ನಾವು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮಾಡಬೇಕೆಂದು ಮನವಿ ಮಾಡಿದ್ದೇವು. ಆದರೆ ನಮ್ಮ ದೇಶದ ಕಾನೂನು ಆ ರೀತಿ ಇದೆ. ಈ ಕಾನೂನನ್ನು ತೀಕ್ಷ್ಣವಾಗಿ ಬದಲಾವಣೆ ಮಾಡಬೇಕು ಅನಿಸುತ್ತದೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ, ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ನಾನು ಪತ್ರ ಬರೆಯುತ್ತೇನೆ ಎಂದಿದ್ದಾರೆ.