ಚಾಮರಾಜನಗರ: ಕಾಲ್ತುಳಿತದಿಂದ 11 ಜನರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಮರಾಜನಗರ ಶಾಸಕ ಸಿ ಪುಟ್ಟರಂಗಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ.
ನಾನು ಕೂಡ ಬೆಂಗಳೂರಿಗೆ ಹೋಗಿದ್ದೆ. ವಿಧಾನ ಸೌಧದ ಬಳಿ ಉತ್ತಮವಾಗಿ ಕಾರ್ಯಕ್ರಮ ನಡೆಯಿತು. ಸ್ಟೇಡಿಯಂಗೆ ನಿರೀಕ್ಷೆ ಮೀರಿ ಅತಿ ಹೆಚ್ಚು ಜನರು ಬಂದಿದ್ದರಿಂದ ಈ ರೀತಿ ಅವಘಡ ಸಂಭವಿಸಿದೆ. ಇದೊಂದು ಆಕಸ್ಮಿಕ ಘಟನೆ. ದೇವರು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಈಗಾಗಲೇ ಸಿಎಂ ತನಿಖೆಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ ಎಂದಿದ್ದಾರೆ.