ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ ಆರೋಪದಲ್ಲಿ ಜೈಲು ಪಾಲಾಗಿ ಈಗಷ್ಟೇ ಹೊರ ಬಂದಿದ್ದಾರೆ. ಈಗ ಅವರ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಈ ಹಿಂದೆ ಕೂಡ ಅವರ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಆ ಆಡಿಯೋ ನಂದಲ್ಲ ಎಂದಿದ್ದರು. ಇದೀಗ ಮಡೆನೂರು ಮನುವಿನ ಮೇಲೆ ಆರೋಪ ಮಾಡಿದ ಸಂತ್ರಸ್ತೆ, ಆಡಿಯೋದ್ದ ಪೂರ್ಣಭಾಗವನ್ನು ಹಂಚಿಕೊಂಡಿದ್ದಾರೆ.
ಮೊದಲ ಆಡಿಯೋದಲ್ಲಿ ಶಿವರಾಜ್ ಕುಮಾರ್ ಸತ್ತು ಹೋಗ್ತಾರೆ. ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ, ಧ್ರುವ ಇನ್ನೊಂದೆರಡು ವರ್ಷ. ಇವರ ಮಧ್ಯೆ ನಾನು ಎಲ್ಲರಿಗೂ ಫೈಟ್ ಕೊಡುತ್ತಿರುವ ಗಂಡುಗಲಿ ಎಂದಿದ್ದ. ಈಗ ಸಂತ್ರಸ್ತೆ ಇದರ ಮುಂದುವರೆದ ಭಾಗ ಬಿಡುಗಡೆ ಮಾಡಿದ್ದಾರೆ. ಈತ ನನ್ನ ಧ್ವನಿ ಅಲ್ಲ ಅಂತಾನೆ. ಆದರೆ, ಎಫ್ ಎಸ್ ಎಲ್ ಗೆ ಕಳುಹಿಸಿ, ಇವನ ಬಣ್ಣ ಬಯಲಾಗಲಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಈಗ ಆ ಆಡಿಯೋದ ಕಂಟಿನ್ಯೂಏಷನ್ ಬಿಟ್ಟಿದ್ದೀನಿ. ಹೆಚ್ಚು ಮಾಹಿತಿ ಇನ್ನೂ ಬೇಕು ಅಂದರೆ ಅದು ಪರೀಕ್ಷೆಯಾಗಲಿ ಗೊತ್ತಾಗುತ್ತೆ ಎಂದು ಸಂತ್ರಸ್ತೆ ಹೇಳಿದ್ದಾರೆ.