ಬೆಂಗಳೂರು : ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಸದ್ಯ ಭಾರೀ ಸಂಕಷ್ಟಕ್ಕೆ ಒಳಗಾಗಿದೆ. ದೇಶಾದ್ಯಂತ ನೂರಾರು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್ ಲೈನ್ಸ್ ರದ್ದುಗೊಳಿಸಿದ್ದು, ಪ್ರಯಾಣಿಕರು ಗೊಂದಲಕ್ಕೆ ಒಳಗಾಗುವಂತೆ ಮಾಡಿದೆ.
ಇದರಿಂದ ವಿಮಾನ ನಿಲ್ದಾಣಗಳಲ್ಲಿ ತೀವ್ರ ಅಸ್ತವ್ಯಸ್ತತೆ ಉಂಟಾಗಿದ್ದು, ಪ್ರವಾಸಿಗರು, ಕುಟುಂಬಗಳು ಮತ್ತು ಯಾತ್ರಾ ರ್ಥಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ತಂದೆಯ ಅಸ್ಥಿ ವಿಸರ್ಜನೆಗಗಾಗಿ ಹೊರಟ ಯುವತಿಯೊಬ್ಬಳಿಗೂ ಕೂಡ ವಿಮಾನ ನಿಲ್ದಾಣದಲ್ಲೇ ಪರದಾಡು ವಂತಹ ಸಂದರ್ಭ ಒದಗಿ ಬಂದಿದೆ.
ಈಗಾಗಲೇ ಕುಟುಂಬಸ್ಥರು ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ ಮತ್ತು ಸಂಬಂಧಿತ ಪೂಜಾ ಕಾರ್ಯಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದ್ದರು. ಆದರೆ ಫ್ಲೈಟ್ ಕ್ಯಾನಲ್ ಆಗಿ ಯುವತಿಯೂ ಏರ್ ಪೋರ್ಟ್ ನಲ್ಲೇ ಬಾಕಿಯಾಗಿ ಆತಂಕ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಮಿತಾ ಎಂಬ ಯುವತಿಯ ತಂದೆ ತೀರಿ ಹೋಗಿದ್ದರಿಂದ ಅಸ್ಥಿ ವಿಸರ್ಜನೆಗಾಗಿ ಹರಿದ್ವಾರಕ್ಕೆ ತೆರಳಬೇಕಿತ್ತು. ಆದರೆ, ಫ್ಲೈಟ್ ರದ್ದು ಗೊಂಡ ಸಮಸ್ಯೆ ಯಿಂದ ಅವರು ದೆಹಲಿ ತಲುಪಲು ಸಾಧ್ಯವಾಗದೇ ಆತಂಕಕ್ಕೆ ಒಳಗಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ನಮಿತಾ ಈ ಬಗ್ಗೆ ಮಾತನಾಡಿ “ನನ್ನ ತಂದೆಯ ‘ಅಸ್ಥಿ’ ವಿಸರ್ಜನೆ ಮಾಡಬೇಕಿದೆ. ನಾನು ಬೆಂಗಳೂರಿನಿಂದ ದೆಹಲಿಗೆ ತಲುಪಬೇಕು. ಹರಿದ್ವಾರ ತಲುಪಲು ದೆಹಲಿಯಿಂದ ಡೆಹ್ರಾಡೂನ್ಗೆ ವಿಮಾನ ಹತ್ತಬೇಕು. ‘ಅಸ್ಥಿ ವಿಸರ್ಜನೆ’ ನಾಳೆಯೇ ಮಾಡಬೇಕು. ಆದರೆ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿಮಾನ ರದ್ದುಪಡಿಸಲಾಗಿದೆ. ಬೇರೆ ವಿಮಾನಗಳ ಟಿಕೆಟ್ ದರ ಹೆಚ್ಚಾಗಿದೆ. ಅಷ್ಟು ಹಣ ಕೊಟ್ಟು ಟಿಕೆಟ್ ಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಇದಕ್ಕೆ ಸರ್ಕಾರವೇ ತನಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧಿಸಿ | ಕೇಂದ್ರ ಶಿಕ್ಷಣ ಸಚಿವರಿಗೆ ಹೆಚ್ಡಿಕೆ ಪತ್ರ



















