ಪಾಕಿಸ್ತಾನ ವಿರುದ್ಧ ಸಮರಕ್ಕೆ ಸಜ್ಜಾಗುತ್ತಿರುವ ಭಾರತೀಯ ನೌಕಾಪಡೆ ಇಂದು ಭರ್ಜರಿ ತಾಲೀಮು ನಡೆಸಿದೆ. ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡುವ ಪರೀಕ್ಷೆ ನಡೆಸಲಾಗಿದೆ.
ಗಂಗಾ ಎಕ್ಸ್ ಪ್ರೆಸ್ ಹೆದ್ದಾರಿ, ಉನ್ನಾವ್ ನ ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೇ, ಸುಲ್ತಾನ್ ಪುರದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇ, ಇತ್ವಾ ಬಳಿಯ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ನಲ್ಲಿ ಭಾರತೀಯ ವಾಯು ಸೇನೆ ತನ್ನ ತಾಲೀಮು ನಡೆಸಿದೆ.
ಸೇನೆಯ ರಫೇಲ್, ಮಿರಾಜ್, ಸುಖೋಯ್ 30 ಹಾಗೂ ಜಾಗ್ವಾರ್ ಯುದ್ಧ ವಿಮಾನಗಳು ಇಂದು ತಮ್ಮ ರಣಾರ್ಭಟ ಪ್ರದರ್ಶನ ನೀಡಿದ್ದವು. ಈ ಮೂಲಕ ಪಾಕ್ ವಿರುದ್ಧ ಯುದ್ಧ ಶುರುವಾದರೆ, ನಿಗದಿತ ರನ್ ವೇಗಳಿಗೆ ಕಾಯುವ ಬದಲು ಎಕ್ಸ್ ಪ್ರೆಸ್ ವೇಗಳ ಮೂಲಕವೇ ಯುದ್ಧ ವಿಮಾನಗಳು ಬಾನಿಗೆ ಹಾರುವ ಮತ್ತು ಇಳಿಯುವ ಸಾಮರ್ಥ್ಯವನ್ನು ಸಾಬೀತು ಮಾಡಿವೆ. ಈ ಮೂಲಕ ಎದುರಾಳಿ ರಾಷ್ಟ್ರ ನಿದ್ದೆಗೆಡುವಂತೆ ಮಾಡಿದೆ.