ಹಲವು ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಲಾರಿ ಮಾಲೀಕರ ಸಂಘ ಇಂದು ಮುಷ್ಕರಕ್ಕೆ ಕರೆ ನೀಡಿದೆ. ಈ ವೇಳೆ ಅಧ್ಯಕ್ಷ ಷಣ್ಮುಗಪ್ಪ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯರಾತ್ರಿಯಿಂದ ಇಡೀ ರಾಜ್ಯದಲ್ಲಿ 40 ಸಾವಿರ ವಾಹನ ಸಂಚರಿಸಬೇಕಿತ್ತು. ಕೆಲವು ವಾಹನಗಳು ಸರಕನ್ನು ಅನ್ ಲೋಡ್ ಮಾಡಿ ಅವುಗಳ ಜಾಗಕ್ಕೆ ಮರಳಿ ಹೋಗುತ್ತಿವೆ. ಲಾರಿ ಮುಷ್ಕರದಿಂದ ನಾಲ್ಕು ಸಾವಿರ ಕೋಟಿ ವಹಿವಾಟು ಸ್ಥಗಿತ ಅಗಿದೆ. ಕೂಡಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದ್ದಾರೆ.