ಬೆಂಗಳೂರು : ಶಾಸಕರು ಐಪಿಎಲ್ ಟಿಕೆಟ್ ಕೇಳಿರುವುದು ತಪ್ಪು. ಆಸಕ್ತಿ ಇದ್ದರೆ ಕಾಸು ಕೊಟ್ಟು ನೋಡಲಿ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಈಗ ಯಾರು ಮಾತನಾಡಿದ್ರೂ ಸರಿಯಲ್ಲ. ಹಿಂದೆ ಕಾಲ್ತುಳಿತ ಪ್ರಕರಣ ಆಯ್ತು. ಆಗ ಯಾರ್ಯಾರು ಏನೇನು ಮಾತನಾಡಿದ್ರು. ಟಿಕೆಟ್ ಇಚ್ಛೆ ಇದ್ದೋರು ತೆಗೆದುಕೊಳ್ಳಲಿ. ಆಸಕ್ತಿ ಇದ್ದರೆ ಕಾಸು ಕೊಟ್ಟು ನೋಡಲಿ. ಟಿಕೆಟ್ ಕೇಳಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ. ಅದು ಕಮರ್ಷಿಯಲ್ ಗೇಮ್ ಅಷ್ಟೇ ಎಂದು ಹೇಳದ್ದಾರೆ.
ಮತ್ತೊಂದು ಸ್ಟೇಡಿಯಂ ನಿರ್ಮಾಣ ವಿಚಾರವಾಗಿ ಮಾತನಾಡಿ, ಸರ್ಕಾರ ಸ್ಟೇಡಿಯಂ ಮಾಡ್ತಿದೆ. ಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ಕೊಡಬೇಕು. ಬೆಂಗಳೂರಿನ ನಾಲ್ಕು ಕಡೆ ಸ್ಟೇಡಿಯಂ ಬೇಕು. ನನ್ನ ಕ್ಷೇತ್ರದಲ್ಲಿ ಸ್ಟೇಡಿಯಂ ಕೇಳಿದ್ದೆ. ಹಿಂದೆ ನಾನು ಜಮೀರ್ಗೆ ಮನವಿ ಮಾಡಿದ್ದೆ. ಸೂರ್ಯನಗರದಲ್ಲಿ ಮಾಡಿ ಅಂತ ಹೇಳಿದ್ದೆವು. ಈಗ ಅಲ್ಲಿ ಸ್ಟೇಡಿಯಂ ಮಾಡೋಕೆ ಹೊರಟಿದೆ. ಬಿಡದಿಯಲ್ಲೂ ಸ್ಟೇಡಿಯಂ ಮಾಡಬೇಕು. ಶಿವರಾಮಕಾರಂತ ಬಡಾವಣೆಯಲ್ಲಿ ಜಾಗವಿದೆ. 40 ಎಕರೆ ಜಾಗ ಇದೆ, ಅಲ್ಲಿಯೂ ಮಾಡಲಿ ಎಂದು ಹೇಳಿದ್ದಾರೆ
ಇದನ್ನೂ ಓದಿ : ಸ್ನೇಹಿತನ ಬರ್ತಡೆಗೆ ಕೇಕ್ ತರಲು ಹೋದವನು ಹಿಟ್ & ರನ್ಗೆ ಬಲಿ!


















