ಬೆಂಗಳೂರು:ಕಾಂಪೋಸ್ಟ್ ಗೊಬ್ಬರದ ಬಳಕೆಯಿಂದ ಮಣ್ಣಿನಲ್ಲಿ ಫಲವತ್ತತೆ ಬರುತ್ತದೆ, ಉತ್ತಮ ಬೆಳೆ ಸಿಗುತ್ತದೆ. ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗಬೇಕು ಉತ್ತಮ ಇಳುವರಿಯಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರ ಎ.ಎನ್.ನಟರಾಜ್ ಗೌಡ ತಿಳಿಸಿದ್ದಾರೆ.
ಜಿಬಿಎ ಕೇಂದ್ರ ಕಛೇರಿಯಲ್ಲಿರುವ ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತದ ಕಾರ್ಯ ಯೋಜನೆ ರೂಪರೇಷೆ ಕುರಿತು ಮಾತನಾಡಿದ ಎ.ಎನ್.ನಟರಾಜ್ ಗೌಡ ಅವರು, ಕಳೆದ ಎರಡು ತಿಂಗಳಲ್ಲಿ 5 ಸಾವಿರ ಟನ್ ಹಸಿ ಕಸವನ್ನು ಕಾಂಪೋಸ್ಚ್ ಗೊಬ್ಬರ ಮಾಡಿ ವಿವಿಧ ಜಿಲ್ಲೆಯ ರೈತರಿಗೆ ಸಬ್ಸಡಿ ಮೂಲಕ ರೈತರಿಗೆ ನೀಡಲಾಗಿದೆ. ಟನ್ 3,600ರೂ ನಿಗದಿ ಮಾಡಲಾಗಿದ್ದು, ರಿಯಾಯಿತಿ ದರದಲ್ಲಿ 2000ರೂ. ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರ ನಾಗರಿಕರು ಹಸಿ ಕಸ, ಒಣಕಸ ವಿಂಗಡನೆ ಮಾಡುವುದರಿಂದ ನಗರ ಸ್ವಚ್ಚತೆ ಜೊತೆಗೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಸಹಕಾರಿಯಾಗಲಿದೆ. ಜಿಬಿಎ ವ್ಯಾಪ್ತಿಯ 5 ಪಾಲಿಕೆ 369 ವಾರ್ಡ್ ಗಳಲ್ಲಿ ಹಸಿಕಸ, ಒಣಕಸ ವಿಂಗಡನೆ ಜನ ಜಾಗೃತಿ ಅಭಿಯಾನ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡುವ ಘಟಕಗಳಿಗೆ ಸ್ಥಾಪನೆ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಗದು ರೂಪದಲ್ಲೇ 25 ಲಕ್ಷ ಪರಿಹಾರ ಕೊಟ್ಟ ಸಚಿವ ಜಮೀರ್ಗೆ ಸಂಕಷ್ಟ | ಐಟಿಗೆ ದೂರು!


















