ಗಾಯಕ ಸೋನು ನಿಗಮ್ ಹೇಳಿಕೆಗೆ ಕರವೇ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಬಗ್ಗೆ, ಕನ್ನಡದ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದು, ಖಂಡನೀಯ. ಕೂಡಲೇ ಗಾಯಕ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಬೇಕು. ತಾವು ಹೇಳಿರುವ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಹಾಡುಗಳನ್ನು ಹಾಡಿದಾಗೆಲ್ಲ ಕನ್ನಡಿಗರು, ಕೈತುಂಬಾ ಹಣ ಹಾಗೂ ಗೌರವ ನೀಡಿ ಕಳುಹಿಸುತ್ತಿದ್ದಾರೆ. ಆದರೆ, ಸೋನು ನಿಗಮ್ ಕನ್ನಡಿಗರನ್ನು ಮಾತ್ರ ಪಾಕಿಸ್ತಾನಿಗಳಂತೆ ನೋಡುತ್ತಿದ್ದಾರೆ. ನಿಮ್ಮ ಮೇಲೆ ಗೌರವ ಇದೆ. ಹೀಗಾಗಿ ಕೂಡಲೇ ಕನ್ನಡಿಗರಲ್ಲಿ ಕ್ಷಮೆ ಕೇಳಲೇಬೇಕು. ಇಲ್ಲವಾದಲ್ಲಿ ಕರವೇ ಕಾರ್ಯಕರ್ತರು ಹೋರಾಟದ ಮೂಲಕ ಎಚ್ಚರಿಕೆ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.