ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ನರಮೇಧದ ದಾಳಿಯಿಂದ ಹಾಸನ ಮೂಲದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನಿವಾಸಿ ಅತ್ರಿ ಪ್ರಭಾಕರ್ ಅವರು ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಅಂತ ತೆರಳಿದ್ದರು. ಪಹಲ್ಗಾಮ್ನಲ್ಲಿ ಕೆಲಕಾಲ ಸುತ್ತಾಟ ನಡೆಸಿದ ಪ್ರಭಾಕರ್, ಉಗ್ರರು ಅಟ್ಟಹಾಸ ಮೆರೆಯುವ ಕೆಲವೇ ಕೆಲ ನಿಮಿಷಗಳ ಹಿಂದಷ್ಟೆ ಆ ಸ್ಥಳದಿಂದ ಹೊರಟಿದ್ದರು. ಉಗ್ರರ ಅಟ್ಟಹಾಸದ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆ ಕಾಶ್ಮೀರದಿಂದ ಇದೀಗ ತಾಯ್ನಾಡಿಗೆ ಅತ್ರಿ ಪ್ರಭಾಕರ್ ಅವರು ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ. ಜೀವ ಉಳಿಸಿಕೊಂಡಿದ್ದಕ್ಕೆ ಇಂದು ಖುಷಿ ಪಟ್ಟಿದ್ದಾರೆ.