ವ್ಯಕ್ತಿಯೊಬ್ಬ ಪತ್ನಿ ಕೊಲೆ ಮಾಡಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೀಲಲಿಗೆ ಎಂಬಲ್ಲಿ ಈ ಘಟನೆ ನಡೆದಿದೆ. ಪತ್ನಿ ರುಂಡ ಕಡಿದು ಬೈಕ್ ನಲ್ಲಿ ಸೂರ್ಯನಗರ ಠಾಣೆಗೆ ಪತಿ ಬಂದಿದ್ದಾನೆ.
ಹೆನ್ನಾಗರ ನಿವಾಸಿ ಶಂಕರ್(28) ಪತ್ನಿ ರುಂಡ ಕಡಿದ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ(26) ಕೊಲೆಯಾಗಿರುವ ಮಹಿಳೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿ ರುಂಡ ಕಡಿದಿದ್ದಾನೆಂಬ ಆರೋಪ ಕೇಳಿ ಬಂದಿದೆ. ಶಂಕರ್ ಹಾಗೂ ಮಾನಸ ಕಳೆದ 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ತಿಂಗಳ ಹಿಂದೆ ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು.

ಜೂ. 3ರಂದು ಶಂಕರ್ ಕೆಲಸದ ನಿಮತ್ತ ತೆರಳಿದ್ದರು. ನಾಳೆ ಬರುವುದಾಗಿ ಹೇಳಿದ್ದ ಶಂಕರ್, ರಾತ್ರಿ ಪತ್ನಿ ಒಬ್ಬಳೇ ಇರುತ್ತಾಳೆಂದು ಮಧ್ಯರಾತ್ರಿ ಬಂದಿದ್ದಾರೆ. ಆದರೆ, ಪತ್ನಿ ಮಾತ್ರ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೆಯೂ ಹಲ್ಲೆ ನಡೆಸಿ, ಪತ್ನಿ ಬೇಡವೆಂದು ಕಳುಹಿಸಿದ್ದಾರೆ. ಆದರೆ, ಪತ್ನಿ ಮಾತ್ರ ಪದೇ ಪದೇ ಬಂದು ಟಾರ್ಚರ್ ಕೊಟ್ಟಿದ್ದಾಳೆ ಎನ್ನಲಾಗಿದೆ. ನಿನ್ನೆ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಶಂಕರ್, ತಲೆ ಕಡಿದು ಠಾಣೆಗೆ ಬಂದಿದ್ದಾನೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.