ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ ಗೆ ಒಳಗಾಗಿದ್ದಾನೆ. ಆತ ಎನ್ ಕೌಂಟರ್ ಗೆ ಬಲಿಯಾಗಿ 15 ದಿನ ಕಳೆದರೂ ಅನಾಥವಾಗಿ ಬಿದ್ದಿದ್ದಾನೆ.
ಆತನ ಪೋಷಕರ ಸುಳಿವು ಮಾತ್ರ ಸಿಗುತ್ತಿಲ್ಲ. ಆತನ ಶವ ಗುರುತಿಸಲು ಯಾರೂ ಮುಂದೆ ಬಂದಿಲ್ಲ. ರಿತೇಶ್ ಕುಮಾರ್ ಎಂಬಾತ ಎನ್ ಕೌಂಟರ್ ಗೆ ಬಲಿಯಾಗಿದ್ದ. ಆದರೆ, ಇದುವರೆಗೂ ಆತನ ಸಂಬಂಧಿಕರು ಮಾತ್ರ ಬಂದಿಲ್ಲ. ಹೀಗಾಗಿ ಪೊಲೀಸರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬಿಹಾರ ಮತ್ತು ವಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಪಿಎಸ್ ಐ ಸುನೀಲ್ ಮತ್ತು ಟೀಮ್ ಸಂಬಂಧಿಕರನ್ನು ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ. ಕೈಯಲ್ಲಿ ಹಂತಕನ ಭಾವಚಿತ್ರ ಹಿಡಿದು ಮಹಾರಾಷ್ಟ್ರದ ವಿವಿಧೆಡೆ ಪೋಷಕರಿಗಾಗಿ ಖಾಕಿ ಪಡೆ ತಲಾಶ್ ನಡೆಸುತ್ತಿದೆ.