ಬೆಳಗಾವಿ: ಜಿಲ್ಲೆಯಲ್ಲಿ ಫೈನಾನ್ಸ್ ಕಿರುಕುಳ ಮತ್ತೆ ಮುಂದುವರೆದಿದೆ.
ತೆಗೆದುಕೊಂಡ ಸಾಲವನ್ನ ಕಟ್ಟದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಮನೆ ಸೀಜ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಚಿಂಚಲಿ ಪಟ್ಟಣದ ನಿವಾಸಿ ಯಲ್ಲವ್ವ ಮಾಂಗ್ಗೆ ಸೇರಿದ ಮನೆಯನ್ನು ಸೀಜ್ ಮಾಡಲಾಗಿದೆ.
ಯಲ್ಲವ್ವ ಮಾಂಗ್ ಮನೆ ಕಟ್ಟಲು ಚಿಕ್ಕೋಡಿಯ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ 3.50 ಲಕ್ಷ ರೂ. ಸಾಲ ಪಡೆದಿದ್ದರು. ಸೊಸೆ ಹೆರಿಗೆಯಾದ ಕಾರಣ ಹಣ ತುಂಬಲು ಯಲ್ಲವ್ವ ವಿಳಂಬ ಮಾಡಿದ್ದಾರೆ. ಹಣ ತುಂಬುವುದಕ್ಕೆ ತಡ ಮಾಡಿದ ಕಾರಣ ಮನೆಯನ್ನು ಸೀಜ್ ಮಾಡಿದ್ದಾರೆ. ಆದರೆ, ಯಲ್ಲವ್ವ ಸಾಲವನ್ನು ಕಟ್ಟಲು ಮುಂದಾದ್ರು ಸಾಲ ತುಂಬಿಸಿಕೊಳ್ಳಲು ಫೈನಾನ್ಸ್ ಕಂಪನಿ ಹಿಂದೇಟು ಹಾಕುತ್ತಿದೆ. ಫೈನಾನ್ಸ್ ಕಂಪನಿಯ ವಿರುದ್ಧ ರೋಚ್ಚಿಗೆದ್ದ ರೈತ ಸಂಘಟನೆ ಸೀಜ್ ಮಾಡಿದ್ದ ಮನೆಯ ಬೀಗವನ್ನು ಒಡೆದು ಹಾಕಿ, ಯಲ್ಲವ್ವನಿಗೆ ಧೈರ್ಯ ತುಂಬಿ ಮನೆ ಕೀಯನ್ನು ಹಸ್ತಾಂತರಿಸಿದೆ.