ಹಾವೇರಿ : ಕೊಬ್ಬರಿ ಹೋರಿ ಟ್ರೋಲ್ ವಿಚಾರಕ್ಕೆ ಕಿಡಿಗೇಡಿಗಳು ಯುವಕನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿರುವ ಘಟನೆ ಹಾವೇರಿ ಜಿಲ್ಲೆಯ ಹೊರವಲಯದ ನಾಗಿನಮಟ್ಟಿಯಲ್ಲಿ ನಡೆದಿದೆ.
ತುಡ್ನೂರು ನಿವಾಸಿ ಮಧು ಎಂಬಾತ ಹಲ್ಲೆಗೊಳಗಾದ ಯುವಕ. ಎನ್ಟಿಸಿ ಸರ್ಕಾರ್ ಹೋರಿ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದ್ದಾನೆ ಎಂದು ಆರೋಪಿಸಿ ಹಲ್ಲೆ ಮಾಡಲಾಗಿದೆ.
ನಾಗಿನಮಟ್ಟಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಮಧು ಬಂದಿದ್ದ, ಹೋರಿ ಹಬ್ಬ ಮುಗಿದ ಬಳಿಕ ಅಲ್ಲಿಯ ಯುವಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಬಳಿಕ ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದವನಿಗೆ ಪೂಜೆ ಆಗಿದೆ ಎಂದು ಹೇಳಿ ವಿಡಿಯೋ ವೈರಲ್ ಮಾಡಿದ್ದಾರೆ. ಹಾವೇರಿ ಶಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಹಾವೇರಿಯಲ್ಲಿ ನಕಲಿ ವೈದ್ಯರ ಹಾವಳಿ.. SSLC ಓದಿದ ಈತ ಊರಿಗೆಲ್ಲ ಫೇಮಸ್ ಡಾಕ್ಟರ್!



















