ಬೆಂಗಳೂರು : ಮಧ್ಯಪ್ರಾಚ್ಯದ ಗಾಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿಯ ಪರಿಣಾಮವಾಗಿ ಬೆಂಗಳೂರಿನಲ್ಲಿ LPG ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ನಗರದ ಹಲವಾರು LPG ಗ್ಯಾಸ್, ಆಟೋ ಗ್ಯಾಸ್ ಬಂಕ್ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದರಿಂದ ಆಟೋ ಹಾಗೂ ಕ್ಯಾಬ್ ಚಾಲಕರಿಗೆ ತೊಂದರೆ ಉಂಟಾಗುತ್ತಿದ್ದು, ದೇವಾಲಯಗಳಲ್ಲಿ ಪ್ರಸಾದದ ಇದರ ಪರಿಣಾಮ ಬೀರುತ್ತಿದೆ.
ನಗರದ ಕೆಲ ಆಟೋ ಗ್ಯಾಸ್ ಬಂಕ್ಗಳಿಗೆ ನಿನ್ನೆ(ಮಾ.10)ಯಿಂದ ಸರಿಯಾದ ಪೂರೈಕೆ ಆಗದ ಕಾರಣ, ಅವು ಮುಚ್ಚಲಾಗಿದೆ. ಶೇಷಾದ್ರಿಪುರಂ–ಗುಟ್ಟಹಳ್ಳಿ ಬಳಿಯ ಟ್ರೂ ಗ್ಯಾಸ್ ಬಂಕ್ ಕೂಡ ಸ್ಟಾಕ್ ಕೊರತೆಯಿಂದ ಬಂದ್ ಆಗಿರುವುದು ತಿಳಿದುಬಂದಿದೆ. ಇನ್ನೊಂದೆಡೆ ಆಟೋ ಗ್ಯಾಸ್ ದರವೂ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ಲೀಟರ್ಗೆ ಸುಮಾರು 65 ರೂಪಾಯಿ ಇದ್ದ ದರವು ಈಗ 80 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.
ಗ್ಯಾಸ್ ಬಂಕ್ ಮ್ಯಾನೇಜರ್ ಬಾಬು ತಿಳಿಸಿದ್ದಾರೆ, ಗ್ಯಾಸ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಈಗ ಬರುತ್ತಿರುವ ಗ್ಯಾಸ್ ಬೆಲೆ ಹೆಚ್ಚಾಗಿದೆ. ಹಳೆಯ ದರದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಸದ್ಯ ಸ್ಟಾಕ್ ಕಡಿಮೆ ಇರುವುದರಿಂದ ಬಂಕ್ ಬಂದ್ ಮಾಡಿದ್ದೇವೆ. ಹೊಸ ಸ್ಟಾಕ್ ಬಂದ ತಕ್ಷಣ ಮತ್ತೆ ಬಂಕ್ ತೆರೆಯಲಾಗುತ್ತದೆ.
ದೇವಾಲಯಗಳ ಪ್ರಸಾದಕ್ಕೂ ಗ್ಯಾಸ್ ಕೊರತೆ
ಬೆಂಗಳೂರು ನಗರದ ಬನಶಂಕರಿ ದೇವಾಲಯದಲ್ಲಿ ಸದ್ಯ ಕೇವಲ ನಾಲ್ಕು ಗ್ಯಾಸ್ ಸಿಲಿಂಡರ್ ಮಾತ್ರ ಉಳಿದಿವೆ. ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಪ್ರಸಾದ ನೀಡಲಾಗುತ್ತಿದ್ದು, ಪ್ರತಿದಿನ 4–5 ಗ್ಯಾಸ್ ಸಿಲಿಂಡರ್ ಅಗತ್ಯವಿದೆ. ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾಸೋಹ ನೀಡಲಾಗುತ್ತದೆ.
ಅನ್ನದಾಸೋಹ ವ್ಯವಸ್ಥಾಪಕ ದೇವರಾಜು ಹೇಳಿದ್ದಾರೆ, ಗ್ಯಾಸ್ ಕೊರತೆ ಇದ್ದರೂ ಪ್ರಸಾದ ವಿತರಣೆ ನಿಲ್ಲಿಸುವುದಿಲ್ಲ. ಭಕ್ತರಿಗೆ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀಡಬಹುದು, ಆದರೆ ಅನ್ನದಾಸೋಹ ಮುಂದುವರಿಯುತ್ತದೆ.
ಇದನ್ನೂ ಓದಿ : ರಾಜ್ಯದ ಎಲ್ಲಾ ಕಡೆಯಲ್ಲೂ ಕಂಬಳ ನೆಡೆಸಲು ಅನುಮತಿ – ಪೆಟಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!


















