ಮನೆಯವರಿಗೆ ಹೇಳದೆ ನೇರ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದ 22 ವರ್ಷದ ಪ್ರಜ್ವಲ್ ಕುಟುಂಬಸ್ಥರಿಂದ ಶಾಶ್ವತವಾಗಿ ದೂರವಾಗಿದ್ದಾನೆ.
ನಿನ್ನೆ ನಡೆದಿರುವ ಕಾಲ್ತುಳಿತದ ದುರಂತದಲ್ಲಿ ಪ್ರಾಣತೆತ್ತಿದ್ದಾನೆ. ಇತ್ತೀಚೆಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದ ಪ್ರಜ್ವಲ್, ಅರೆಕಾಲಿಕ ಉದ್ಯೋಗದಲ್ಲಿ ತೊಡಗಿದ್ದ. ನಿನ್ನೆಯಷ್ಟೇ ಕಂಪನಿಯೊಂದಕ್ಕೆ ಇಂಟರ್ ವ್ಯೂಗೂ ಹೋಗಿದ್ದ. ಆದರೆ ಅಷ್ಟರೊಳಗಾಗಿಯೇ ಪ್ರಜ್ವಲ್ ಬಾಳಲ್ಲಿ ದುರಂತ ಘಟಿಸಿದೆ. ನಿನ್ನೆ ಪ್ರಜ್ವಲ್ ಪೋಷಕರು ಕ್ರೀಡಾಂಗಣಕ್ಕೆ ಹೋಗಲು ಬೇಡ ಅಂತಾ ಹೇಳಿದ್ದಾರೆ. ಆದರೆ, ಕೇಳದ ಪ್ರಜ್ವಲ್ ಮಾತ್ರ ಮನೆಯವರಿಗೆ ಹೇಳದೆ ಬಂದಿದ್ದ ಎನ್ನಲಾಗಿದೆ. ಈಗ ಶಾಶ್ವತವಾಗಿ ಕುಟುಂಬಸ್ಥರನ್ನು ದುಃಖದ ಮಡುವಿನಲ್ಲಿ ದೂಡಿದ್ದಾನೆ.